ಪಟ್ಟಣದ ಕಾಮಾಟಿಗರ ಪೇಟೆಯ ಊರ ದೇವತೆ ಗಂಗಮ್ಮ ದೇವಾಲಯದಲ್ಲಿ ಕಾರ್ತೀಕ ಮಾಸದ ಕಡೆಯ ಶುಕ್ರವಾರದಂದು ನೋಟುಗಳನ್ನು ಬಳಸಿ ಲಕ್ಷ್ಮೀ ಅಲಂಕಾರವನ್ನು ಮಾಡಲಾಗಿತ್ತು.
ಭಕ್ತರು ನೀಡಿರುವ ಒಂದು ಲಕ್ಷಕ್ಕೂ ಹೆಚ್ಚು ಹಣದ ನೋಟುಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪೂಜೆಯಲ್ಲಿ ಪಾಲ್ಗೊಳ್ಳಲು ನೂರಾರು ಮಂದಿ ಆಗಮಿಸಿದ್ದರು.
‘ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗಂಗಮ್ಮನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಊರ ದೇವತೆಯಾದ ಗಂಗಮ್ಮನ ಭಕ್ತರು ಅಪಾರ. ಕಾರ್ತೀಕ ಮಾಸದ ಕಡೆಯ ಶುಕ್ರವಾರ ದೀಪೋತ್ಸವ, ಲಕ್ಷ್ಮೀ ಅಲಂಕಾರ ವಿಶೇಷವಾಗಿದೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ಕೆ.ಜಯರಾಮ್, ವೆಂಕಟಾದ್ರಿ, ಅಪ್ಪಿ, ಕೃಷ್ಣಮೂರ್ತಿ, ಛಲಪತಿ, ಮುರಳಿ, ಅರ್ಚಕ ರಾಮು ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -