27.1 C
Sidlaghatta
Sunday, February 22, 2026

ಗ್ರಾಮೀಣ ಪ್ರದೇಶದ ಕಡೆ ಸಾಹಿತ್ಯ ಪರಿಷತ್ತನ್ನು ಪರಿಚಯಿಸಿದ್ದರು ಹಾಲಂಬಿ

- Advertisement -
- Advertisement -

ಕನ್ನಡದ ಸೇವೆಯೊಂದಿಗೆ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದ ಕಡೆ ಸಾಹಿತ್ಯ ಪರಿಷತ್ತನ್ನು ಪರಿಚಯಿಸಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಹಾಗೂ ದೊರೆತ ಅವಧಿಯಲ್ಲಿ ಹಲವಾರು ಸಮ್ಮೇಳನಗಳನ್ನು ಆಯೋಜಿಸಿದ ಕೀರ್ತಿ ಹಾಲಂಬಿಯವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಗ್ರಾಮ ಪಂಚಾಯತಿ, ಮೇಲೂರು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ತಾಲ್ಲೂಕು ಕ.ಸಾ.ಪ ವತಿಯಿಂದ ಆಯೀಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲಿಕ ಹಾಲಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡದ ಬಗ್ಗೆ ಅಪಾರ ಚಿಂತನೆವುಳ್ಳ ವ್ಯಕ್ತಿ ವಿಧಿವಶವಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮಾತನಾಡಿ, ನಾಡು ನುಡಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಾಲಂಬಿ ಅವರ ಅಗಲಿಕೆಯಿಂದ ಕನ್ನಡ ನಾಡಿಗೆ ಅಪಾರ ನಷ್ಟವುಂಟಾಗಿದೆ ಎಂದು ವಿಷಾದಿಸಿದರು.
ಶಿಕ್ಷಕ ಎಂ.ಸೀನಪ್ಪ, ಎಸ್.ಆರ್.ಶ್ರೀನಿವಾಸಮೂರ್ತಿ ಪುಂಡಲಿಕ ಹಾಲಂಬಿ ಅವರ ಕುರಿತು ಮಾತನಾಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ, ಧರ್ಮೇಂದ್ರ, ಎಸ್.ಆರ್.ಶ್ರೀನಿವಾಸ್, ಸುದರ್ಶನ್, ಎಸ್.ಪಿ.ಆನಂದ್, ಶಿವಾನಂದ್, ಚರಣ್, ರಾಘವೇಂದ್ರ, ಎಂ.ಶ್ರೀನಿವಾಸ್, ರೂಪೇಶ್, ಸುಧೀರ್, ಎಂ.ಆರ್.ಸುರೇಶ್, ಗಂಗಾಧರಸ್ವಾಮಿ, ಉಮೇಶ್, ಪ್ರಕಾಶ್, ಜನಾರ್ಧನ್, ದ್ಯಾವಪ್ಪ, ಚಂದ್ರೇಗೌಡ, ಶ್ರೀನಿವಾಸ್, ತ್ಯಾಗರಾಜ್, ಸುರೇಶ್ ರಾಜ್, ಗೋಪಾಲ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!