20.1 C
Sidlaghatta
Thursday, December 25, 2025

ಚುಟುಕು ಸಾಹಿತ್ಯ ಪರಿಷತ್ ವತಿನಿಂದ ಕುವೆಂಪು ಜನ್ಮದಿನಾಚರಣೆ

- Advertisement -
- Advertisement -

ಕನ್ನಡಮ್ಮನ ಮಡಿಲಿಗೆ ಮೊಟ್ಟ ಮೊದಲ ಜ್ಞಾನಪೀಠ ಪಶಸ್ತಿಯನ್ನು ನೀಡಿದ ಹಿರಿಯ ಸಾಹಿತ್ಯ ದಿಗ್ಗಜ ಕುವೆಂಪು ಅವರು ಇಡೀ ವಿಶ್ವದ ಜನರನ್ನು ಸೋದರರಂತೆ ಕಾಣಬೇಕೆಂದು ಸಂದೇಶ ಸಾರಿದ ಮೇರು ವ್ಯಕ್ತಿತ್ವ ಎಂದು ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಟಿ.ಎಂ ಈಶ್ವರ್ಸಿಂಗ್ ತಿಳಿಸಿದರು.
ನಗರದ ಟಿ.ಬಿ.ರಸ್ತೆಯ ನಗರಸಭೆ ಮಳಿಗೆಗಳಲ್ಲಿರುವ ಶ್ರೀ ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ಶನಿವಾರ ಸಂಜೆ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚಾರಣೆ ನೆನಪಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸುವ ಮೂಲಕ ವಿಶ್ವಮಾನವರಾಗಿ ಸಾಹಿತ್ಯ ಪ್ರಿಯರ ಹೃದಯದಲ್ಲಿ ನಿರಂತರವಾಗಿ ಬದುಕುಳಿದವರು. ಉತ್ಕೃಷ್ಟ ಕೃತಿಗಳಾದ ಶ್ರೀರಾಮಾಯಣ ದರ್ಶನಂ, ಕೊಳಲು, ಪಾಂಚಜನ್ಯ, ಕಿಂದರಿಜೋಗಿ, ಮಲೆಗಳಲ್ಲಿ ಮದುಮಗಳು, ನಾಟಕಗಳು, ಕವನ ಸಂಕಲನಗಳ ಮೂಲಕ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಂ.ದೇವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ರವರ ತತ್ವ ಸಿದ್ದಾಂತಗಳನ್ನು ಎಲ್ಲಾ ವರ್ಗದ ಜನರು ಪಾಲಿಸುವ ಮೂಲಕ ವಿಶ್ವ ಮಾನವ ಕುವೆಂಪುರವರ ಪರಿಕಲ್ಪನೆಯನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಈಧರೆ ತಿರುಮಲಪ್ರಕಾಶ್,ಉಪಾಧ್ಯಕ್ಷ ದೇವರಮಳ್ಳೂರು ಚನ್ನಕೃಷ್ಣಪ್ಪ, ಶಿಕ್ಷಕರಾದ ಪ್ರಸಾದ್, ಚಿಕ್ಕವೆಂಕಟರಾಯಪ್ಪ, ಬಾಸ್ಕರ್, ಸಂಘಟನಾ ಕಾರ್ಯದರ್ಶಿ ಎಂ.ಎನ್.ನಾಗಭೂಷಣ್, ಗೌರವ ಸದಸ್ಯ ಬೂದಾಳ ರಾಮಾಂಜಿನಪ್ಪ, ತಬಲ ಕಲಾವಿದ ದ್ಯಾವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!