ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರು ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸದಿರುವುದರಿಂದ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಸೋಮವಾರ ಪತ್ರವನ್ನು ಗ್ರೇಡ್ ೨ ತಹಶೀಲ್ದಾರರಿಗೆ ಸಲ್ಲಿಸಿದ್ದರು. ಆದರೆ ಅದೇ ಗ್ರಾಮದ ಕೆಲವರೊಂದಿಗೆ ಮಂಗಳವಾರ ಕಾಂಗ್ರೆಸ್ ಮುಖಂಡರು ಆಗಮಿಸಿ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ ಎಂಬುದಾಗಿ ಪತ್ರವನ್ನು ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ಅವರಿಗೆ ಸಲ್ಲಿಸಿದರು.
“ಜಂಗಮಕೋಟೆ ಕಾಕಚೊಕ್ಕಂಡಹಳ್ಳಿ ಗ್ರಾಮದ ನಿವಾಸಿಗಳಾದ ನಾವು ತಿಳಿಸುವುದೇನೆಂದರೆ, ನಮ್ಮ ಗ್ರಾಮದ ಕೆಲವರು ಚುನಾವಣಾ ಬಹಿಷ್ಕಾರದ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಅದು ಸುಳ್ಳಿನಿಂದ ಕೂಡಿದ ಮಾಹಿತಿ ಮತ್ತು ರಾಜಕೀಯ ಕುತಂತ್ರದಿಂದ ಕೂಡಿದೆ. ಅಂಕತಟ್ಟಿ ಗೇಟ್ ನಿಂದ ಕಾಕಚೊಕ್ಕಂಡಹಳ್ಳಿ ಗ್ರಾಮದವರೆಗೆ ಮತ್ತು ಭಕ್ತರಹಳ್ಳಿಯಿಂದ ಮಳಮಾಚನಹಳ್ಳಿಯವರೆಗೆ ರಸ್ತೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ಮಂಜೂರು ಮಾಡಿಸಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಶಾಸಕರಿಂದ ಗುದ್ದಲಿ ಪೂಜೆ ನಡೆಸುವುದನ್ನು ಮುಂದೂಡಿದೆ. ನಾವುಗಳು ಯಾವುದೇ ಕಾರಣಕ್ಕೂ ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ರಾಜ್ಯ ಸಂಚಲಕ ಟಿ.ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ಕಾಕಚೊಕ್ಕಂಡಹಳ್ಳಿ ಗ್ರಾಮದ ಎನ್.ಪಿ.ವೆಂಕಟೇಶ್, ವೆಂಕಟೇಶಪ್ಪ, ಮಂಜು, ಆರ್.ವೆಂಕಟೇಗೌಡ, ಬಿ.ಕೃಷ್ಣಪ್ಪ, ರಾಮಾಂಜಿ, ನಾಗೇಶ್, ಪುನೀತ್, ಸುಮಂತ್ ಗೌಡ ಹಾಜರಿದ್ದರು.
- Advertisement -
- Advertisement -
- Advertisement -