ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣ ದಿನವನ್ನು ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವುದರಿಂದ ಶುಕ್ರವಾರ ವಿಶ್ವಕರ್ಮ ಜನಾಂಗದವರು ಬಸ್ ಮೂಲಕ ತೆರಳಿದರು.
ಕಾಳಿಕಾಂಬ ಕಮಠೇಶ್ವರ ದೇವಾಲಯದ ಬೆಳಿಗ್ಗೆ ಬಳಿ ಸೇರಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವಿಶ್ವಕರ್ಮ ಜನಾಂಗದವರು ತಮ್ಮ ಜನಾಂಗದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಮರಣ ದಿನವನ್ನು ಯಶಸ್ವಿಗೊಳಿಸಲು ಹೊರಟರು.
ವಿಶ್ವಕರ್ಮ ತಾಲ್ಲೂಕು ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಜನಾರ್ಧನಮೂರ್ತಿ, ಕಾಳಿಕಾಂಬ ಕಮಠೇಶ್ವರ ದೇವಾಲಯದ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಉಪಾಧ್ಯಕ್ಷ ಈಶ್ವರಾಚಾರಿ, ಯುವಕರ ಸಂಘದ ಅಧ್ಯಕ್ಷ ರಾಘವೇಂದ್ರ, ಜಗದೀಶ್, ಗೋಪಿ, ಸುಂದರಾಚಾರಿ, ಶರತ್, ರಾಜೇಶ್, ನಾಗೇಶಾಚಾರಿ, ಮಾಣಿಕ್ಯಾಚಾರಿ, ಶ್ರೀಕರ, ನಾರಾಯಣಸ್ವಾಮಿ, ವಿನಯ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -