ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಿಡ್ಲಘಟ್ಟ ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆಯಿತು.
ಬಾಗೇಪಲ್ಲಿಯ ಬಿ.ಎಸ್.ಸತೀಶ್ ಬಾಬು ಅಧ್ಯಕ್ಷರಾಗಿ, ಗೌರಿಬಿದನೂರು ವಿ.ಅಶ್ವತ್ಥಪ್ಪ ಗೌರವ ಕಾರ್ಯದರ್ಶಿಯಾಗಿ, ಚಿಕ್ಕಬಳ್ಳಾಪುರ ವೆಂಕಟರಾಮಯ್ಯಶೆಟ್ಟಿ ಅವರನ್ನು ಖಜಾಂಚಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಿಡ್ಲಘಟ್ಟ ಪಿ.ಎಸ್.ಮಂಜುನಾಥ ಮತ್ತು ಎಸ್.ಸುರೇಶ್ಬಾಬು, ಜಂಟಿ ಕಾರ್ಯದರ್ಶಿಗಳಾಗಿ ಶೇಷಾದ್ರಿ ಮತ್ತು ಕೃಷ್ಣಾ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವತ್ಥನಾರಾಯಣ, ಕಾರ್ಯಕಾರಿ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಟಿ.ಕೆ.ಮಧುಸೂದನ್, ರಾಜ್ಯಸಂಘದ ಪ್ರತಿನಿಧಿಯಾಗಿ ಸುರೇಶ್ಬಾಬು ಅವರನ್ನು ಆಯ್ಕೆ ಮಾಡಲಾಯಿತು.
ಶಿಡ್ಲಘಟ್ಟ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ ಗುಪ್ತ, ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ಮಂಜುನಾಥ್, ಜಂಟಿ ಕಾರ್ಯದರ್ಶಿ ಎಲ್.ಸುರೇಶ್, ಲಕ್ಷ್ಮೀನಾರಾಯಣ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -