17.1 C
Sidlaghatta
Sunday, November 9, 2025

ತಾದೂರು ಗ್ರಾಮದ ಹೊಲಗಳಿಗೆ ಕೀಟಕೋಟಲೆಗಳು

- Advertisement -
- Advertisement -

ತಾಲ್ಲೂಕಿನ ತಾದೂರು ಗ್ರಾಮದ ಹೊಲಗಳಿಗೆ ಬುಧವಾರ ಕುರುಬೂರಿನ ರೇಷ್ಮೆ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಕೀಟ ಶಾಸ್ತ್ರಜ್ಞರು ಭೇಟಿ ನೀಡಿ ಕೀಟಗಳಿಂದಾದ ಅನಾಹುತವನ್ನು ಪರಿಶೀಲಿಸಿದರು.
ತಾದೂರು ಗ್ರಾಮದ ರಾಮಾಂಜಿನಪ್ಪ ಅವರ ಹೊಲ ಹಾಗೂ ಸುತ್ತಮುತ್ತಲಿನ ಹೊಲಗಳಿಗೆ ಹುಳಗಳ ಧಾಳಿ ನಡೆದಿದ್ದು, ರಾಗಿ, ಅವರೆ, ಜೋಳದ ಎಲೆಗಳನ್ನೆಲ್ಲಾ ಹುಳುಗಳು ಕಬಳಿಸಿ ಅಲ್ಲೇ ಕೋಶಾವಸ್ಥೆಯನ್ನು ಕೆಲವು ತಲುಪಿದ್ದರೆ, ಕೆಲವಂತೂ ಪತಂಗಗಳಾಗಿವೆ.
ಕೀಟಶಾಸ್ತ್ರಜ್ಞರಾದ ಡಾ.ಸುಮಿತ್ರಮ್ಮ, ಡಾ.ವಿದ್ಯಾಮೂಲೆಮನಿ, ಡಾ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಫಾಸ್ಪನಾಪಾಸ್ ಅಥವಾ ಕ್ಲೋರೋಪೈರಿಪಾಸ್ 2 ಮಿಲಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಕೀಟಗಳ ಹತೋಟಿ ಸಾಧ್ಯ ಎಂದು ಅವರು ಸಲಹೆ ನೀಡಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೃಷಿ ತಾಂತ್ರಿಕ ಅಧಿಕಾರಿ ಶೋಭಾಪಾಟೀಲ್, ರೈತರಾದ ರಾಮಾಂಜಿನಪ್ಪ, ಕೃಷ್ಣಪ್ಪ, ಮುನಿರಾಜು, ರೈತ ಅನುವುಗಾರರಾದ ಬೂದಾಳ ರಾಮಾಂಜಿ, ಮುತ್ತೂರು ಗಜೇಂದ್ರ, ಸಾದಹಳ್ಳಿ ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!