26.1 C
Sidlaghatta
Wednesday, January 14, 2026

ತಾಯ ಮಡಿಲಿಗೆ ಸೇರಿದ ಕಳೆದುಹೋಗಿದ್ದ ಮಗು

- Advertisement -
- Advertisement -

ಪುರ ಠಾಣೆಯ ಪೊಲೀಸ್ ಪೇದೆಗಳು ಕಳೆದುಹೋಗಿದ್ದ ಕಂದನನ್ನು ತಾಯ ಮಡಿಲಿಗೆ ಸೇರಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ ಪೊಲೀಸ್‌ ಪೇದೆಗಳಾದ ಎಚ್.ಎಂ.ಸಂತೋಷ್‌ ಮತ್ತು ಪಿ.ವಿ.ಜಯಚಂದ್ರ
ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ ಪೊಲೀಸ್‌ ಪೇದೆಗಳಾದ ಎಚ್.ಎಂ.ಸಂತೋಷ್‌ ಮತ್ತು ಪಿ.ವಿ.ಜಯಚಂದ್ರ

ಸಲ್ಲಾಪುರಮ್ಮ ದೇವಾಲಯದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಮುಂಜಾನೆ ಆರು ಗಂಟೆ ಸಮಯದಲ್ಲಿ ಎರಡು ವರ್ಷದ ಗಂಡು ಮಗುವನ್ನು ಕಂಡ ಸಾರ್ವಜನಿಕರು ಗುಂಪುಗೂಡಿದ್ದರು. ಮುದ್ದಾಗಿದ್ದ ಮಗುವನ್ನು ಸಾಕಿಕೊಳ್ಳು ಆಗಲೇ ಕೆಲವರು ಸಿದ್ಧವಾಗಿದ್ದರು. ಅಷ್ಟರಲ್ಲಿ ಪೊಲೀಸ್‌ ಪೇದೆಗಳಾದ ಎಚ್.ಎಂ.ಸಂತೋಷ್‌ ಮತ್ತು ಪಿ.ವಿ.ಜಯಚಂದ್ರ ಆಗಮಿಸಿ, ಸಿಕ್ಕ ಮಗುವನ್ನು ಕರೆದುಕೊಂಡು ಹೋಗಿ ಸಾಕಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ಅಲ್ಲಲ್ಲಿ ವಿಚಾರಿಸುತ್ತಾ ಊರೆಲ್ಲಾ ಸುತ್ತಿದ್ದಾರೆ. ಚಿಂದಿ ಹಾಕು ಪ್ಲಾಸ್ಟಿಕ್‌ ಆಯುವವರ ಮಗುವಿರಬೇಕೆಂದು ಮಾಹಿತಿ ಪಡೆದು ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾರೆ.
‘ಮಗುವನ್ನು ನೋಡುತ್ತಿದ್ದಂತೆ ರೈಲ್ವೆ ನಿಲ್ದಾಣದ ಬಳಿ ತಂಗುವ ಚಿಂದಿ ಹಾಕು ಪ್ಲಾಸ್ಟಿಕ್‌ ಆಯುವ ಮಹಿಳೆ ಅತ್ತ ಕಡೆಯಿಂದ ಓಡಿ ಬಂದರೆ, ಇತ್ತ ಕೆಳಗಿಳಿಸಿದ್ದ ಮಗುವು ಓಡುತ್ತಾ ಹೋಗಿ ತಾಯಿಯನ್ನು ಅಪ್ಪಿಕೊಂಡಿತು. ಸಿನಿಮಾ ದೃಶ್ಯದಂತೆ ನಮಗಲ್ಲಿ ಭಾಸವಾಯಿತು. ಮಗುವಿನ ಹೆಸರು ಕಿರಣ್‌, ತಾಯಿಯ ಹೆಸರು ಸುಮಾ ಎಂದು ತಿಳಿಯಿತು. ಮಗುವನ್ನು ಎಲ್ಲೆಂದರಲ್ಲಿ ಬಿಟ್ಟು ಬರಬಾರದು ಎಂದು ಬುದ್ದಿಹೇಳಿ, ತಾಯಿ ಮಗು ಒಂದಾದ ಸಂತೃಪ್ತಿಯಿಂದ ವಾಪಸಾದೆವು’ ಎಂದು ಪೊಲೀಸ್‌ ಪೇದೆ ಪಿ.ವಿ.ಜಯಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!