ಶಿಡ್ಲಘಟ್ಟದ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು ಗೌರಿಬಿದನೂರಿನಲ್ಲಿ ವಡೋ ಇಂಟರ್ ನ್ಯಾಷನಲ್ ವತಿಯಿಂದ ನಡೆದ ಎರಡನೇ ದಕ್ಷಿಣ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಟಿ.ಎನ್. ಹೇಮಂತ್ ಹಳದಿ ಬೇಲ್ಟ್ ನ ‘ಕತಾ’ ದಲ್ಲಿ ಪ್ರಥಮ. ಮತ್ತು ಕುಮಿತೆಯಲ್ಲಿ 3ನೇ ಸ್ಥಾನ. ಹರ್ಷಿತ್ ಎರಡನೇ ಸ್ಧಾನ ಪಡೆದಿದ್ದಾರೆ. ಆಕ್ಟೋಬರ್ ನಲ್ಲಿ ಮುಂಬೈನಲ್ಲಿ ಅಕ್ಷಯಕುಮಾರ್ ನಡೆಸುವ ಒಂಭತ್ತನೇ ಕೂಡೋ ನ್ಯಾಷನಲ್ ಚಾಂಪಿಯನ್ ಶಿಪ್ ಕ್ಕೆ ಆಯ್ಕೆಯಾದ ಟಿ.ಎನ್.ಹೇಮಂತ್ ಅವರನ್ನು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಮತ್ತು ಸಿ.ಆರ್.ಪಿ ಶ್ರೀನಿವಾಸ್ ಅಭಿನಂದಿಸಿದರು.
- Advertisement -