16.1 C
Sidlaghatta
Wednesday, December 24, 2025

ದಾವಣಗೆರೆ ರೇಷ್ಮೆ ಕೃಷಿಕರಿಗೆ ಸಮಗ್ರ ಕೃಷಿ ಪಾಠ

- Advertisement -
- Advertisement -

ಕೃಷಿಕರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡರೆ ಮಾತ್ರ ಪ್ರಧಾನಿಯವರ ಆಶಯದಂತೆ ಮುಂದಿನ ಐದು ವರ್ಷಗಳಲ್ಲಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯ ಎಂದು ಸಹಾಯಕ ರೇಷ್ಮೆ ನಿರ್ದೇಶಕ ಎಸ್.ಜೆ.ಶ್ರೀಹರ್ಷ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡರ ಸಮಗ್ರ ಕೃಷಿ ತೋಟಕ್ಕೆ ದಾವಣಗೆರೆ ರೇಷ್ಮೆ ಕೃಷಿ ಪಾಠಶಾಲೆಯಿಂದ 54 ಮಂದಿ ರೈತರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.
ರೈತರು ಭೂಮಿ, ನೀರು, ಸಮಯ, ಕೂಲಿ ಕಾರ್ಮಿಕರ ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಆದಾಯ ಹೆಚ್ಚಳ ಸಾಧ್ಯವಿದೆ. ಪ್ರತಿ ಹನಿ ನೀರು ಕೂಡ ಅಮೂಲ್ಯವಾದದ್ದು. ಪ್ರಗತಿಪರ ರೈತರಾದ ಎಚ್.ಜಿ.ಗೋಪಾಲಗೌಡರ ಮಾದರಿಯನ್ನು ಅನುಸರಿಸುವುದು ಈ ಕಾಲಕ್ಕೆ ಅವಶ್ಯಕ ಎಂದು ಹೇಳಿದರು.
ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಮಾತನಾಡಿ, ಹಿಪ್ಪುನೇರಳೆ ಸೊಪ್ಪಿನೊಂದಿಗೆ 30ಕ್ಕೂ ಹೆಚ್ಚು ಬೆಳೆಗಳಲ್ಲು ಬೆಳೆದಿದ್ದೇನೆ. ಚೆಂಡು ಹೂಗಳನ್ನು ಬೆಳೆಯುವುದು ಕೀಟಗಳು ಇತರ ಗಿಡಗಳಿಂದ ಆಕರ್ಷಿಸಲು. ಇದರಿಂದ ಔಷಧಿ ಸಿಂಪಡಣೆ ತಪ್ಪುತ್ತದೆ. ಟೊಮೆಟೊ, ಬದನೆ, ಬೆಂಡೆ, ಮೆಣಸಿನಕಾಯಿ, ಗೋರಿಕಾಯಿ, ಕಡಲೆಕಾಯಿ, ಸೊಪ್ಪುಗಳು, ವಿವಿಧ ಹಣ್ಣುಗಳು ಬೆಳೆದಿರುವುದಾಗಿ ತೋರಿಸಿ ವಿವರಿಸಿದರು.
ರೇಷ್ಮೆ ಉಪನಿರ್ದೇಶಕ ಎಂ.ಜಿ.ದೇವೇಂದ್ರಪ್ಪ ಮಾತನಾಡಿ, ಐದು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ರೈತರು ಪ್ರಾತ್ಯಕ್ಷಿಕೆಯಾಗಿ ಸಮಗ್ರ ಕೃಷಿಯ ಬಗ್ಗೆ ತಿಳಿಯಲು ಬಂದಿದ್ದು, ರೈತರಿಂದ ಅನುಮಾನಗಳನ್ನು ಪರಿಹರಿಸಿಕೊಂಡರು ಎಂದರು.
 

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!