20.1 C
Sidlaghatta
Thursday, November 30, 2023

ದಿನಗೂಲಿ ನೌಕರರಿಗೆ ಸೇವಾಭದ್ರತೆ ಕಲ್ಪಿಸಲು ಒತ್ತಾಯ

- Advertisement -
- Advertisement -

ದಿನಗೂಲಿ ಹಾಗು ಹೊರಗುತ್ತಿಗೆ ಆದಾರದ ಮೇಲೆ ದುಡಿಯುತ್ತಿರುವ ನೌಕರರಿಗೆ ಸೇವಾಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಪದಾಧಿಕಾರಿಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗು ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಶಂಕರ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳೆದ ಸುಮಾರು ೨೦-–೨೫ ವರ್ಷದಿಂದ ತಮ್ಮ ಇಲಾಖೆಯಡಿ ಇರುವ ವಸತಿನಿಲಯಗಳಲ್ಲಿ ದಿನಗೂಲಿ ಆಧಾರದ ಮೇಲೆ ಅಡುಗೆ ಕೆಲಸ ಹಾಗು ಅಡುಗೆ ಸಹಾಯಕಿಯರಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಇತ್ತೀಚೆಗೆ ಹೊರಗುತ್ತಿಗೆಗೆ ಪರಿವರ್ತಿಸಿರುತ್ತಾರೆ. ಆದರೆ ಸರ್ಕಾರ ಇದೀಗ ವಿದ್ಯಾರ್ಹತೆ ಮೇಲೆ ಕಾಯಂ ನೌಕರರನ್ನಾಗಿಸಲು ಮುಂದಾಗಿದ್ದು ಅನಕ್ಷರಸ್ಥರಾದ ಬಹುತೇಕ ನೌಕರರು ಬೀದಿಗೆ ಬೀಳಲಿದ್ದೇವೆ. ಹಾಗಾಗಿ ಅನುಭವದ ಆದಾರದ ಮೇಲೆ ನಮ್ಮನ್ನು ನೌಕರರನ್ನಾಗಿ ಪರಿಗಣಿಸಿ ನಮಗೆ ಸೇವಾ ಭದ್ರತೆ ಒದಗಿಸಿ ನಮಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ತಾಲ್ಲೂಕು ಕಾರ್ಯದರ್ಶಿ ಗುಲ್ಜಾರ್, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಫಯಾಜ್, ಹಾಸ್ಟೆಲ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀರಾಮಣ್ಣ, ಕಾರ್ಯದರ್ಶಿ ಪಾಪಣ್ಣ, ಸುಶೀಲಮ್ಮ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!