ಯೋಗದ ಮೂಲಕ ಆರೋಗ್ಯ, ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು, ನಿರಂತರ ಯೋಗಿಗಳಾಗಿ, ನಿರೋಗಿಗಳಾಗಿ ಎಂದು ಮುಖ್ಯ ಶಿಕ್ಷಕರಾದ ಎಸ್.ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿಶ್ವ ಯೋಗ ದಿನಾಚರಣೆಯನ್ನು ಸಾಮೂಹಿಕವಾಗಿ ಯೋಗ ಮಾಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಯೋಗ ಗುರು ಎಚ್.ಎಸ್. ವಿಠ್ಠಲ್ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನವನ್ನು ಮಾಡಿಸುವುದರ ಮುಖೇನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಕರು ಸಹ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಶಿವಕುಮಾರ್, ನವೀನ್ ಕುಮಾರ್, ಡಿ.ಭವ್ಯ, ದೊಡ್ಡ ನಾಯ್ಕ, ಸವಿತ, ಶಿವಶಂಕರ್, ಸೈಯದ್ ಷರ್ಫುದ್ದೀನ್ ಪಾಷ ಹಾಜರಿದ್ದರು.
- Advertisement -
- Advertisement -
- Advertisement -
- Advertisement -