ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದ ಕಡೆಯಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿಯ ಕಡೆಗೆ ಸಂಚಾರ ಮಾಡುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ನಿರುಪಯುಕ್ತವಾಗಿರುವ ತೆರೆದ ಬಾವಿಯಿಂದಾಗಿ ಅನೇಕ ಮಂದಿ ವಾಹನ ಸವಾರರು, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಒಳಗಾಗಿದ್ದಾರೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಬಳ್ಳಾಪುರಕ್ಕೆ ಸಂಚಾರ ಮಾಡುವ ಮುಖ್ಯರಸ್ತೆಯಾಗಿರುವ ಈ ರಸ್ತೆಯ ತಿರುವಿನಲ್ಲೆ ಬಾವಿಯಿರುವುದರಿಂದ ವೇಗವಾಗಿ ಬರುವ ವಾಹನ ಸವಾರರು, ರಾತ್ರಿಯ ವೇಳೆಯಲ್ಲಿ ತಿರುವು ಗೊತ್ತಾಗದೆ ನೇರವಾಗಿ ಬಾವಿಯೊಳಗೆ ಬೀಳುವಂತಹ ಸಂಭವಗಳೇ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ.
ಸರ್ಕಾರ, ವಿವಿಧ ಯೋಜನೆ ಅಡಿ ಹಾಗೂ ಖಾಸಗಿಯಾಗಿ ಕೊರೆದ ನಿರುಪಯುಕ್ತ ಹಾಗೂ ವಿಫಲ ಕೊಳವೆಬಾವಿ ಮುಚ್ಚಲು ಜಿಲ್ಲಾಡಳಿತ ಗ್ರಾಮ ಪಂಚಾಯಿತಿಗಳಿಗೆ ಆದೇಶ ನೀಡಿದೆ. ನೀರಿಲ್ಲದೆ ಬತ್ತಿಹೋಗಿರುವ ಅಪಾಯಕಾರಿಯಾಗಿ ಪರಿಣಮಿಸಿರುವ ತೆರೆದ ಬಾವಿಗಳನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಗಮನಹರಿಸಿ, ಇಂತಹ ತೆರೆದ ಬಾವಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರೈತರಾದ ಜಿ.ಎಂ.ರವಿಚಂದ್ರ, ಮುನಿವೆಂಕಟಪ್ಪ, ಶ್ರೀನಿವಾಸ್, ರಾಮಚಂದ್ರ, ವೆಂಕಟೇಶ್, ಶಿವಕುಮಾರ್, ಜಿ.ಸಿ.ಮುನಿರಾಜು ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -
- Advertisement -