ನೀರಾವರಿ ಹೋರಾಟಕ್ಕೆ ಬೈಕ್ ರ್ಯಾಲಿ

- Advertisement -
- Advertisement -

ಚಿಕ್ಕಬಳ್ಳಾಪುರದ ಚದಲಪುರದಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಸದಸ್ಯರು ಬೆಂಬಲಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಸಿದರು.
ಜಿಲ್ಲಾದ್ಯಂತ ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಸದಸ್ಯರು ಶಾಶ್ವತ ನೀರಾವರಿ ಹೋರಾಟಕ್ಕೆ ವಿವಿಧ ಭಾಗಗಳಿಂದ ಚದಲಪುರಕ್ಕೆ ತೆರಳಿದ ಸಂದರ್ಭದಲ್ಲಿ ಚಿಂತಾಮಣಿಯಿಂದ ಬಂದ ಸದಸ್ಯರು ಶಿಡ್ಲಘಟ್ಟದ ಸದಸ್ಯರೊಂದಿಗೆ ಸೇರಿ ಬೈಕ್ ರ್ಯಾಲಿ ನಡೆಸಿ ನಂತರ ಜೊತೆಯಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.
ಶಾಶ್ವತ ನೀರಾವರಿ ಕಾಮಗಾರಿ ತ್ವರಿತವಾಗಿ ನಡೆಯಬೇಕು. ಇದು ಬಯಲು ಸೀಮೆಯ ಜನರ ಜೀವನ್ಮರಣ ಪ್ರಶ್ನೆಯಾಗಿದೆ. ಜನ ಜಾನುವಾರುಗಳು ಉಳಿಯಲು ಹಾಗೂ ಜಿಲ್ಲೆಯು ಆರ್ಥಿಕವಾಗಿ ಬೆಳೆಯಲು, ರೈತರ ಕಷ್ಟ ನಿವಾರಣೆಯಾಗಲು ಶುದ್ಧ ನೀರು ಬೇಕೇ ಬೇಕು ಎನ್ನುತ್ತಾ ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಲು ತೆರಳಿದರು.
ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋದಗೂರು ನವೀನ್, ತಾಲ್ಲೂಕು ಗೌರವಾಧ್ಯಕ್ಷ ಶಿವಕುಮಾರ್, ಕಲ್ಲಹಳ್ಳಿ ವೆಂಕಟೇಶ್, ನವೀನ್ ಕುಮಾರ್, ನಾಗಾರ್ಜುನ, ಅಶೋಕ್, ಸತೀಶ್, ದೇವರಾಜ್, ಚೊಕ್ಕನಹಳ್ಳಿ ದೇವಪ್ಪ, ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!