21.1 C
Sidlaghatta
Saturday, November 22, 2025

ಪರ್ಜನ್ಯ ವರುಣ ಯಾಗ ಮುಕ್ತಾಯ

- Advertisement -
- Advertisement -

ಜಿಲ್ಲೆಯಲ್ಲಿ ಬರಸ್ಥಿತಿ ಮಾಯವಾಗಿ ಮಳೆ ಸುರಿಯಲೆಂದು ತಾಲ್ಲೂಕಿನ ಬಶೆಟ್ಟಹಳ್ಳಿ ಪಂಚಾಯ್ತಿಯ ನಲ್ಲರಾಳಹಳ್ಳಿಯ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಎಚ್ ಡಿ ದೇವೇಗೌಡರವರ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಐದು ದಿನಗಳ ಕಾಲ ನಡೆದ ‘ಪರ್ಜನ್ಯ ವರುಣ ಯಾಗ’ವು ಸೋಮವಾರ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಂಡಿತು.
ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಯಾಗದ ಕಡೆಯ ದಿನವಾದ ಸೋಮವಾರ ಬೆಳಿಗ್ಗೆ 7.30ರಿಂದಲೇ ಯಜ್ಞ ಪ್ರಾರಂಭಿಸಿದ ಪುರೋಹಿತರು, ಹಸುವಿನ ಶುದ್ಧ ತುಪ್ಪ, ಹಲಸು, ಮಾವು, ಆಲದ ಮರದ ತುಂಡುಗಳು ಸೇರಿದಂತೆ ಹಲವಾರು ಔಷಧಿ ಸಸ್ಯಗಳನ್ನು ಹೋಮಕ್ಕೆ ಬಳಸಿ, ಮಂತ್ರ ಪಠಿಸಿದರು.
ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಯಾಗ ಮಾಡಿರುವ ತಂಡ ಚಾಮುಂಡೇಶ್ವರಿ ದೇವಾಲಯದ ಬಳಿ ಈ ವಿಶೇಷ ಯಾಗ ನಡೆಸಿದರು.
‘ಇದಕ್ಕಾಗಿ ಮಹಾರಾಷ್ಟ್ರದಿಂದ ತಜ್ಞ ಅರ್ಚಕರನ್ನು ಕರೆಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಅಗತ್ಯ ವಸ್ತುಗಳನ್ನು ತರಿಸಲಾಗಿದೆ. ಈ ವಿಶೇಷ ಯಾಗಕ್ಕೆ 4 ಅಗ್ನಿಕುಂಡಗಳನ್ನು ನಿರ್ಮಿಸಲಾಗಿದೆ. ಯಾಗದ ಪ್ರಭಾವ, ಅದರಿಂದ ಸೃಷ್ಟಿಯಾಗುವ ಸಕಾರಾತ್ಮಕ ತರಂಗಗಳು ಹಾಗೂ ಅಗ್ನಿಗೆ ಆಹುತಿ ನೀಡುವ ವಿವಿಧ ವಸ್ತುಗಳಿಂದ ಹೊರಹೊಮ್ಮುವ ಹೊಗೆಯ ಕಾರಣದಿಂದ ಮೋಡಗಳು ಸೃಷ್ಟಿಯಾಗುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ, ಒಟ್ಟಾರೆ ಯಾಗದ ಉದ್ದೇಶವು ನಮ್ಮ ಭಾಗದ ಜನರ ಅನುಕೂಲಕ್ಕಾಗಿ ಮಳೆ ಬರಲೆಂಬುದಾಗಿದೆ. ರೈತರು ಚೆನ್ನಾಗಿದ್ದರೆ ಸಮಾಜ ಸುಭಿಕ್ಷವಾಗಿರುತ್ತದೆ. ಪ್ರಕೃತಿ ಮಾತೆ ಅನುಗ್ರಹಿಸಲಿ ಎಂದು ಎಲ್ಲರೂ ಒಮ್ಮನಸ್ಸಿನಿಂದ ಪ್ರಾರ್ಥಿಸಿದ್ದೇವೆ’ ಎಂದು ಶ್ರೀ ಎಚ್ ಡಿ ದೇವೇಗೌಡರವರ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯ ರಾಜಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ನಗರಸಭಾ ಸದಸ್ಯರಾದ ಲಕ್ಷ್ಮಣ, ಜಬೀವುಲ್ಲ, ಸಂಧ್ಯಾ ಮಂಜುನಾಥ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್, ದೊಣ್ಣಹಳ್ಳಿ ರಾಮಣ್ಣ, ವೆಂಕಟೇಶ್, ತಿಮ್ಮನಾಯಕನಹಳ್ಳಿ ರಮೇಶ್, ಆದಿಲ್ಪಾಷ, ಚಾಂದ್ ಪಾಷ, ಸಿರಾಜ್, ಸಾದಲಿ ಚಲಪತಿ, ನಂಜಪ್ಪ, ಆಂಜನೇಯ, ಗೋಪಾಲಗೌಡ, ಕೆ.ಎಸ್. ಮಂಜುನಾಥ್, ಆರ್.ಎ.ಉಮೇಶ್, ತಾದೂರು ರಘು, ರಾಮಚಂದ್ರ, ಲಕ್ಷ್ಮಣ, ಲಕ್ಕಹಳ್ಳಿ ರಾಮಾಂಜನೇಯುಲು, ಶ್ರೀನಿವಾಸರೆಡ್ಡಿ, ಚಿಂತಾಮಣಿ ಡಿ.ವೈ. ಎಸ್.ಪಿ. ಕೃಷ್ಣಮೂರ್ತಿ, ಕೆ.ಜಿ.ಎಫ್. ಡಿ.ವೈ.ಎಸ್.ಪಿ ಶ್ರೀನಿವಾಸಮೂರ್ತಿ, ಪ್ರಧಾನ ಅರ್ಚಕ ಗಿರೀಶ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!