ಸರ್ಕಾರ ಪೊಲೀಸರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರಿಶೀಲಿಸಬೇಕು. ಆ ಮೂಲಕ ಕಾನೂನು ಸುವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯ ತಾಲ್ಲೂಕು ಘಟಕದ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ಸಮಾಜದ ಆಧಾರ ಸ್ತಂಭವಾದ ಪೊಲೀಸರು ತಮ್ಮ ಹಲವು ದಶಕಗಳ ಬೇಡಿಕೆ ಮತ್ತು ಹಕ್ಕುಗಳ ಈಡೇರಿಕೆಗಾಗಿ ಜೂನ್ 4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಗೈರು ಹಾಜರಾಗಿ ತಮ್ಮ ಪ್ರತಿಭಟನೆಯ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ. ತಕ್ಷಣವೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಪೊಲೀಸರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಆಮ್ ಆದ್ಮಿ ಪಾರ್ಟಿಯ ತಾಲ್ಲೂಕು ಘಟಕದ ಸಂಚಾಲಕ ವಿಸ್ಡಮ್ ನಾಗರಾಜ್, ಸಹಸಂಚಾಲಕ ನರಸಿಂಹಪ್ಪ, ರಾಮಚಂದ್ರ, ಮೌಲಾ ಅಲಿ, ನವೀದ್, ಆರ್. ನಾಗರಾಜಪ್ಪ, ಬಾಬಾಜಾನ್, ಆನಂದರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
- Advertisement -
- Advertisement -
- Advertisement -