25.1 C
Sidlaghatta
Thursday, September 28, 2023

ಪೋತನ ಭಾಗವತ ಭಕ್ತಿಯ ಪ್ರತೀಕ

- Advertisement -
- Advertisement -

ಸನಾತನ ಧರ್ಮದ ಸಾರಂಶ ಭಾಗವತದಲ್ಲಿದೆ. ಭಾಗವನ್ ವ್ಯಾಸರು ಈ ಭಾಗವತವನ್ನು ಮನುಕುಲಕ್ಕೆ ನೀಡಿದ ಗುರುಪಿತಾಮಹರು. ಇದನ್ನು ತೆಲುಗಿನಲ್ಲಿ ಸಮರ್ಪಿಸಿದವರು ಪೋತನಾಮಾತ್ಯರು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶ್ರೀರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೋತನ ಭಾಗವತ ಪ್ರವಚನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವುಗಳು ಪ್ರಾಪಂಚಿಕ ಆಸೆಗಳಲ್ಲೇ ಮುಳುಗಿದ್ದೇವೆ. ಇದರಿಂದ ನಮ್ಮ ಮಾನವ ಜನ್ಮದ ಗುರಿ ಏನು ಎನ್ನುವುದನ್ನು ಮರೆತಿದ್ದೇವೆ. ಈ ಮರೆತಿರುವ ಗುರಿಯನ್ನು ಎಚ್ಚರಿಸಲು ಮತ್ತು ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪೋತನ ಭಾಗವತ ಸಪ್ತಾಹ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪೋತನ ಭಾಗವತವು ಗುರುವಾಕ್ಯಗಳಿಂದ ಕೂಡಿರುತ್ತದೆ. ಪೋತನ ಭಾಗವತವು ಭಕ್ತಿಯ ಪ್ರತೀಕ ಎಂದರು.
ಶ್ರೀರಾಮಾನುಜಾಚಾರ್ಯರ ಸಿದ್ದಾಂತ ಎಂದರೆ ಭಕ್ತಿಯ ಪಂಥ. ಭಕ್ತಿಯ ಮೂಲಕ ಪರಮಾತ್ಮನಿಗೆ ಶರಣಾಗತಿಯಾಗುವುದೇ ಈ ಸಿದ್ದಾಂತದ ಮೂಲ ಉದ್ದೇಶ. ಇದು ಕೇವಲ ತತ್ವವಲ್ಲ, ಸಾಧನೆಯ ಮಾರ್ಗ. ಇದನ್ನು ಸಾಮಾನ್ಯರು ಸಹ ಪಾಲಿಸಬಹುದು. ಇದಕ್ಕಾಗಿ ಹೆಚ್ಚು ಶ್ರಮಪಡಬೇಕಾಗಿಲ್ಲ. ರಾಮಾನುಜಾಚಾರ್ಯರ ತತ್ವ ಸಿದ್ದಾಂತ ಅನುಸರಿಸುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಧರ್ಮದ ಮೇಲೆ ಸಮಾಜ ನಿಂತಿದೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ. ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಸತ್ಯನಾರಾಯಣರಾವ್ ಮಾತನಾಡಿ ದೈವ ಚಿಂತನೆಗಳಿಂದ ಶರೀರದಲ್ಲಿರುವ ಜೀವಕೋಶಗಳು ಚೈತನ್ಯಭರಿತವಾಗುತ್ತದೆ. ಇದರಿಂದ ಖಾಯಿಲೆಗಳು ದೂರವಾಗುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ರವರು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಭಾಗವತ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ಅವರು ಪೋತನ ಭಾಗವತದ ಪ್ರವಚನವನ್ನು ನೀಡಿದರು. ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು. ಏಳು ದಿನಗಳ ಕಾಲ ಸಂಜೆ ೬.೩೦ ರಿಂದ ೮ ಗಂಟೆಯವರೆಗೂ ಈ ಭಾಗವತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಯೋಗಿನಾರೇಯಣ ಮಠ ಟ್ರಸ್ಟ್ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಸದಸ್ಯರಾದ ಕೆ.ನರಸಿಂಹಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ವಾನರಾಶಿ ಬಾಲಕೃಷ್ಣ ಭಾಗವತರ್ , ಪೊಲೀಸ್ ಗುಪ್ತಚರ ಇಲಾಖೆಯ ರಮೇಶ್, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ದಾಸ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಯರಮರೆಡ್ಡಿ ವೆಂಕಟರಮಣಪ್ಪ, ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಡಿ.ಮಂಜುನಾಥ್, ಶ್ರೀನಾಥ್, ರಾಮಚಂದ್ರಪ್ಪ, ವಿಜಯಕುಮಾರ್, ಎಸ್.ಸೋಮಶೇಖರ್ ಮುಂತಾದವರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!