21.5 C
Sidlaghatta
Thursday, July 31, 2025

ಬಿಎಸ್ಎನ್ಎಲ್ ಉದ್ಯೋಗಿಗಳ ಮುಷ್ಕರ

- Advertisement -
- Advertisement -

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳು ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಂಗಳವಾರ ಬಿ.ಎಸ್.ಎನ್.ಎಲ್ ಕಚೇರಿಯ ಮುಂದೆ ಮುಷ್ಕರ ನಡೆಸಿದರು.
ಎರಡು ದಿನಗಳ ಕಾಲ ಸಂಪೂರ್ಣ ಮುಷ್ಕರವನ್ನು ನಡೆಸುತ್ತಿದ್ದೇವೆ. ಮೂರನೇ ವೇತನ ಪರಿಷ್ಕರಣೆ, ಎಲ್ಲಾ ಭತ್ಯೆಗಳ ಪರಿಷ್ಕರಣೆಗೆ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಎರಡನೇ ವೇತನ ಪರಿಷ್ಕರಣೆ ಸಮಯದಲ್ಲಿ ಪರಿಷ್ಕರಣೆ ಆಗದೇ ಉಳಿದ ಎಲ್ಲ ಭತ್ಯೆಗಳನ್ನೂ ಇತ್ಯರ್ಥಗೊಳಿಸಬೇಕು. ಪ್ರತ್ಯೇಕ ಸಹಾಯಕ ಟವರ್ ಕಂಪನಿಯನ್ನು ರಚಿಸುವ ಸರ್ಕಾರದ ಪ್ರಸ್ತಾಪವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಬಿಎಸ್ಎನ್ಎಲ್ ಉದ್ಯೋಗಿಗಳಾದ ವಿರೂಪಾಕ್ಷಪ್ಪ, ವಾಸು, ಚಂದ್ರಶೇಖರ್, ಗೋವಿಂದಪ್ಪ, ಶೇಖರ್, ನರಸಿಂಹಪ್ಪ, ಶ್ರೀನಿವಾಸ್, ಲಕ್ಷ್ಮಮ್ಮ, ನಾರಾಯಣಸ್ವಾಮಿ, ನಾಗರಾಜ್, ಆನಂದ್, ಶಂಕರಪ್ಪ, ರಾಮಚಂದ್ರ, ಭರತ್, ನೂರುಲ್ಲ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!