ಬೇಸಿಗೆಯ ಬಿಸಿಗೆ ಕಂಗಾಲಾದ ದ್ರಾಕ್ಷಿ ಬೆಳೆಗಾರರು

- Advertisement -
- Advertisement -

ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವ ಬಿಸಿಲಿನ ತಾಪಮಾನದಿಂದಾಗಿ ದ್ರಾಕ್ಷಿ ಬೆಳೆಗಾರರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ತಾಲ್ಲೂಕಿನೆಲ್ಲೆಡೆ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿರುವ ದ್ರಾಕ್ಷಿ ಬೆಳೆಯು, ಬಿರುಬೇಸಿಗೆಯಿಂದಾಗಿ ಬಾಡುತ್ತಿದ್ದು, ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿರುವ ರೈತರ ಪರಿಸ್ಥಿತಿ ದಿಕ್ಕು ಕಾಣದಂತಾಗಿದೆ.
ಬೆಂಗಳೂರು ಬ್ಲೂ ದ್ರಾಕ್ಷಿ ಪ್ರತಿ ಕೆ.ಜಿ.ಗೆ ೬೦ ರೂಪಾಯಿಗಳ ದಾಖಲೆ ಬೆಲೆಯನ್ನು ಹೊಂದಿದ್ದರೂ ಕೂಡಾ ರೈತರು ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿ, ಕೊರೆಯಿಸಿರುವ ಕೊಳವೆಬಾವಿಗಳಿಂದ ದ್ರಾಕ್ಷಿಯ ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನೀರಿನ ಅಭಾವವಾದರೆ, ಮತ್ತೊಂದು ಇರುವ ನೀರನ್ನು ಸದ್ಬಳಕೆ ಮಾಡಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಂತಹ ವಿದ್ಯುತ್ತಿನ ಕೊರತೆ ರೈತರನ್ನು ಕಾಡತೊಡಗಿದೆ. ಕೆಲವು ಮಂದಿ ರೈತರು, ಕೈಗೆ ಬಂದ ಬೆಳೆಗಳನ್ನು ನಷ್ಟಮಾಡಿಕೊಳ್ಳಲು ಇಷ್ಟವಿಲ್ಲದೆ, ಕೊಳವೆಬಾವಿಗಳ ಮೂಲಕ ನೀರು ಹೊರತೆಗೆಯಲು ವಿದ್ಯುತ್ತಿಗೆ ಕಾಯುವ ಬದಲಾಗಿ ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಿ ಜನರೇಟರ್ಗಳನ್ನು ಇಟ್ಟುಕೊಂಡು ನೀರು ಹೊರತೆಗೆಯುತ್ತಿರುವ ಪ್ರಯತ್ನಗಳೂ ನಡೆಯುತ್ತಿವೆ. ದಿನವೊಂದಕ್ಕೆ ೧,೦೦೦ ರೂಪಾಯಿಗಳಂತೆ ಜನರೇಟರ್ಗಳಿಗೆ ಡಿಸೇಲ್ ಹಾಕಬೇಕಾಗಿದೆ.
ಕೆಲವು ರೈತರು, ಜನರೇಟರ್ಗಳಿಗೆ ಬಂಡವಾಳ ಹಾಕಲು ಶಕ್ತಿಯಿಲ್ಲದವರು, ಟ್ಯಾಂಕರುಗಳ ಮೂಲಕ ದ್ರಾಕ್ಷಿಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ, ಆದರೆ ಸುಮಾರು ದಾಖಲೆಯ ಪ್ರಮಾಣದಲ್ಲಿ ೩೯ ರಿಂದ ೪೦ ಡಿಗ್ರಿಯವರೆಗೂ ದಾಖಲಾಗುತ್ತಿರುವ ತಾಪಮಾನದಿಂದಾಗಿ ದ್ರಾಕ್ಷಿಯ ಗೊಂಚಲುಗಳಲ್ಲಿನ ಕಾಯಿಗಳು ನೀರಿನ ಅಂಶವನ್ನು ಕಳೆದುಕೊಂಡು ಒಣಗಲಾರಂಭಿಸಿವೆ.
ದ್ರಾಕ್ಷಿಯನ್ನು ಬೆಳೆಯಲು ಬೇಸಿಗೆಕಾಲ ಉತ್ತಮವಾದ ವಾತಾವರಣವಾಗಿದ್ದರೂ ಕೂಡಾ ಇತ್ತಿಚೆಗೆ ದಾಖಲಾಗುತ್ತಿರುವ ತಾಪಮಾನ ದ್ರಾಕ್ಷಿ ಬೆಳೆಗಳಲ್ಲಿ ಗುಣಮಟ್ಟವನ್ನು ಕಾಪಾಡಲು ಸಹಕಾರಿಯಾಗುತ್ತಿಲ್ಲ, ಶೀತದ ವಾತಾವರಣದಲ್ಲಿ ಹಣ್ಣಿಗೆ ರೋಗ ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಿಮ ಮತ್ತು ಚಳಿಗಾಲದಲ್ಲಿಯೂ ದ್ರಾಕ್ಷಿಗೆ ರೋಗಗಳು ಹರಡುವಂತಹ ಮಳೆಗಾಲ ಯೋಗ್ಯವಲ್ಲ. ಆದ್ದರಿಂದ ಯಾವ ಕಾಲದಲ್ಲಿಯೂ ಬೆಳೆಗಳನ್ನು ಉಳಿಸಿಕೊಂಡು ಹಾಕಿರುವ ಬಂಡವಾಳ ತೆಗೆಯಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊಳವೆಬಾವಿ ಕೊರೆಯಿಸಲು ಸುಮಾರು ೭ ಲಕ್ಷ ರೂಪಾಯಿಗಳು ಬಂಡವಾಳ ಹಾಕಿದ್ದೇವೆ, ದ್ರಾಕ್ಷಿಗೆ ಸುಮಾರು ೩ ಲಕ್ಷದ ವರೆಗೂ ಬಂಡವಾಳ ಹಾಕಿದ್ದೇವೆ, ಇಷ್ಟೆಲ್ಲಾ ಹಾಕಿ ಬೆಳೆ ಬೆಳೆಯಲು ಕರೆಂಟುಗಳಿಲ್ಲ, ದ್ರಾಕ್ಷಿಯ ಕಾಯಿಗಳಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದ್ದು, ಇಳುವರಿ ಬರುತ್ತಿಲ್ಲ, ಕಾಯಿ ಹಣ್ಣಾಗುತ್ತಿಲ್ಲ ಎಂದು ತಮ್ಮ ತೊಂದೆಗಳನ್ನು ವಿವರಿಸುತ್ತಾರೆ ದ್ರಾಕ್ಷಿ ಬೆಳೆಗಾರ ಜಿ.ಡಿ.ವೆಂಕಟೇಶ್.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!