ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದದ್ದು ಹಿರಿಯರ ಕರ್ತವ್ಯವಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ದೇಶದಪೇಟೆಯ ವಾಸಿ ಎಂಟನೇ ತರಗತಿಯ ಮನೋಜ್ ಕುಮಾರ್ ಬಡಾವಣೆಯ ಆಸಕ್ತ ಮಕ್ಕಳಿಗೆ ಉಚಿತವಾಗಿ ನೃತ್ಯ ಶಿಕ್ಷಣವನ್ನು ನೀಡಿದ್ದು, ಆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೋಷಕರು ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ಅವರ ಆಸಕ್ತಿ ಕ್ಷೇತ್ರಗಳನ್ನು ಗುರುತಿಸಿ ಅದರಲ್ಲಿ ಮುಂದುವರಿಯಲು ಸಹಕಾರಿಯಾಗಬೇಕು. ತನಗೆ ನೃತ್ಯದ ಆಸಕ್ತಿಯಿದ್ದು, ಇತರೇ ಮಕ್ಕಳಿಗೂ ಕಲಿಸುವ ಮನೋಜ್ ಕುಮಾರ್ ಅಭಿನಂದನೀಯ ಎಂದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಿಟಲ್ ಸ್ಟಾರ್ಸ್ ಜ್ಯೂನಿಯರ್ ಡ್ಯಾನ್ಸ್ ಶಾಲೆಯ ಮಕ್ಕಳು ಜಾನಪದ, ದೇಶಭಕ್ತಿ, ಸಿನೆಮಾ ಮತ್ತು ದೇವರ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಯೋಗದ ನೃತ್ಯ ಎಲ್ಲರ ಮನಸೆಳೆಯಿತು.
ಕ್ರೀಡಾಪಟು ಮುನಿರಾಜು, ಎಂ.ಶ್ರೀನಿವಾಸ್, ಆರ್.ಆರ್.ಸುರೇಶ್, ನಗರಸಭೆ ಸದಸ್ಯ ಕೇಶವಮೂರ್ತಿ, ಬಂಗಾರುಸ್ವಾಮಿ, ನಗರ್ತ ಮಂಡಳಿಯ ಅಧ್ಯಕ್ಷ ಕೆ.ಆರ್.ಶಿವಶಂಕರ್, ವಿನಾಯಕ, ರಾಜಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -