ಮಳೆಯಿಂದ ಅಸ್ತವ್ಯಸ್ಥಗೊಂಡ ಶಿಡ್ಲಘಟ್ಟ ನಗರ

- Advertisement -
- Advertisement -

ನಗರದಲ್ಲಿ ಬುಧವಾರ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತವಾದ ಮಳೆ ಬಿದ್ದ ಕಾರಣ ಕೆಲವು ಮರಗಳ ರೆಂಬೆಗಳು ಉರುಳಿಬಿದ್ದಿವೆ. ಬಸ್ ನಿಲ್ದಾಣದ ಬಳಿ ಚರಂಡಿ ತುಂಬಿ ತ್ಯಾಜ್ಯವೆಲ್ಲಾ ರಸ್ತೆ ಮೇಲೆ ಕಪ್ಪು ಬಣ್ಣದಿಂದ ಹರಿಯಿತು.

ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿಯಲ್ಲಿ ಟಿ.ಬಿ ರಸ್ತೆ
ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿಯಲ್ಲಿ ಟಿ.ಬಿ ರಸ್ತೆ

ಚರಂಡಿಗಳು ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ರಸ್ತೆಯೆಲ್ಲಾ ತ್ಯಾಜ್ಯದಿಂದ ತುಂಬಿ ಹೋಗಿತ್ತು. ರಸ್ತೆ ಬದಿಯ ಅಂಗಡಿಗಳಿಗೂ ತ್ಯಾಜ್ಯದ ನೀರು ಸಿಂಪಡನೆಯಾಯಿತು. ರಸ್ತೆ ಬದಿಯ ವೀಳೆಯದೆಲೆ, ತೆಂಗಿನಕಾಯಿ ಮುಂತಾದ ವ್ಯಾಪಾರಸ್ತರು ಧಿಡೀರನೆ ಬಿದ್ದ ಮಳೆ ಹಾಗೂ ಚರಂಡಿ ನೀರಿನಿಂದಾಗಿ ಪರದಾಡಿದರು. ಶಾಸಕ ಎಂ.ರಾಜಣ್ಣ ಅವರ ಮನೆಯ ಮುಂದಿನ ರಸ್ತೆಯೂ ಚರಂಡಿ ನೀರಿನಿಂದ ಆವೃತವಾಗಿತ್ತು.
ಶಾಸಕ ಎಂ.ರಾಜಣ್ಣ ಅವರ ಮನೆಯಿರುವ ರಸ್ತೆಯ ದುರವಸ್ಥೆ
ಶಾಸಕ ಎಂ.ರಾಜಣ್ಣ ಅವರ ಮನೆಯಿರುವ ರಸ್ತೆಯ ದುರವಸ್ಥೆ

ಅಂಚೆ ಕಛೇರಿಯ ರಸ್ತೆಯಲ್ಲಿ ಸಾಲಾಗಿರುವ ಮಳೆ ಮರಗಳ ರೆಂಬೆಗಳು ಮುರಿದುಬಿದ್ದವು. ಮಳೆಯೆಂದು ರಸ್ತೆಯಲ್ಲಿ ಜನಸಂಚಾರವಿರದ ಕಾರಣ ಯಾರಿಗೂ ಅಪಾಯವಾಗಿಲ್ಲ. ಕಾಂಗ್ರೆಸ್ ಭವನದ ಮೇಲೆ ಮಳೆಮರದ ದೊಡ್ಡ ರೆಂಬೆಯು ಮುರಿದುಬಿದ್ದಿದೆ.
ನಗರದ ಹಲವಾರು ಪ್ರದೇಶಗಳಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ತ್ಯಾಜ್ಯದೊಂದಿಗೆ ಬೆರೆತು ಮನೆಗಳಿಗೆ ನುಗ್ಗಿದೆ. ಹನ್ನೆರಡನೇ ವಾರ್ಡ್ನ ಖಾಸಿಂಪಾಳ್ಯದಲ್ಲಿ ನಸೀರ್ ಪಾಷ ಅವರ ಮನೆಯ ಮೇಲೆ ಸಿಲ್ವರ್ ಮರ ಉರುಳಿ ಬಿದ್ದಿದೆ. ಅವರ ರೇಷ್ಮೆ ಬಿಚ್ಚಾಣಿಕಾ ಘಟಕದ ಒಳಗೆ ತ್ಯಾಜ್ಯದ ನೀರೆಲ್ಲಾ ನುಗ್ಗಿ ಅಸ್ತವ್ಯಸ್ತಗೊಂಡಿದೆ.
ನಗರದ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯ ವ್ಯಾಪಾರಸ್ಥರ ಪರದಾಟ
ನಗರದ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯ ವ್ಯಾಪಾರಸ್ಥರ ಪರದಾಟ

ಪ್ರತಿ ಬಾರಿಯೂ ಮಳೆ ಬಂದಾಗ ನಡೆಯುವ ಈ ಅವ್ಯವಸ್ಥೆಯನ್ನು ಸರಿಪಡಿಸುತ್ತಿಲ್ಲ. ಕುಡಿಯುವ ನೀರಿನ ಸಂಪಿಗೆ ತ್ಯಾಜ್ಯ ಹರಿದು ಹೋಗಿ ಆಗುವ ಅನಾಹುತಕ್ಕೆ ಯಾರು ಹೊಣೆ. ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡದ ನಗರಸಭೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಜನಗಳು ಹರಿಹಾಯ್ದರು.
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!