ಹಂಡಿಗನಾಳದ ಕೆ.ವಿ.ಭವನದಲ್ಲಿ ಶುಕ್ರವಾರ ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಉಚಿತವಾಗಿ ಮಹಾಕಾಳ ಸರ್ಪಯಾಗ ಹಾಗೂ ಶ್ರೀಲಕ್ಷ್ಮೀ ಪೂಜೆಯನ್ನು ನಡೆಸಲಾಯಿತು. ನೂರಾರು ಮಂದಿ ಕುಟುಂಬ ಸಮೇತರಾಗಿ ಪೂಜೆ ಮತ್ತು ಯಾಗದಲ್ಲಿ ಪಾಲ್ಗೊಂಡಿದ್ದರು.
ಲೋಕಕಲ್ಯಾಣಾರ್ಥವಾಗಿ ಯಾಗ ಮತ್ತು ಪೂಜೆಯನ್ನು ಮಾಡುತ್ತಿದ್ದೇವೆ. ಮಳೆಯಾಗಲಿ, ಪೂಜೆ ಮಾಡಲಿಚ್ಚಿಸುವ ಬಡವರಿಗೆ ಅನುಕೂಲವಾಗಲಿ ಮತ್ತು ಊರಿಗೆ, ತಾಲ್ಲೂಕಿಗೆ ಒಳ್ಳೆಯದಾಗಲಿ, ನಾಡು ಸುಭಿಕ್ಷವಾಗಲಿ ಎಂಬ ಉದ್ದೇಶದಿಂದ ಈ ಬೃಹತ್ ಸರ್ಪಯಾಗ ಮತ್ತು ಲಕ್ಷ್ಮೀಪೂಜೆಯನ್ನು ಮಾಡುತ್ತಿರುವುದಾಗಿ ಶ್ರೀ ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಶಿವಶಂಕರ ಗುರೂಜಿ ಹೇಳಿದರು.
ಲೋಕಕಲ್ಯಾಣಕ್ಕಾಗಿ ನಡೆಸುವ ಮಹಾಕಾಳ ಸರ್ಪಯಾಗದಲ್ಲಿ ಸರ್ಪದೋಷವುಳ್ಳವರು ಪೂಜೆ ಸಲ್ಲಿಸಿ ದೋಷ ನಿವಾರಿಸಿಕೊಳ್ಳಬಹುದಾಗಿದೆ. ಪೂಜಾಕಾರ್ಯದಲ್ಲಿ ಭಾಗಿಯಾದವರು ತಮಗೂ, ಊರಿಗೂ ಮತ್ತು ತಾಲ್ಲೂಕಿಗೂ ಒಳಿತನ್ನು ಕೋರಬೇಕೆಂದು ಕೋರಿದರು.
ಪೂಜೆಯ ಸೇವಾಕರ್ತ ಆರ್.ಎನ್.ಆರ್ ಪ್ರಾವಿಜನ್ ಸ್ಟೋರ್ಸ್ ಆರ್.ನಾಗರಾಜ್ ಮಾತನಾಡಿ, ಈ ವಿಶಿಷ್ಟ ಯಾಗ ಮತ್ತು ಪೂಜೆಯು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಡುತ್ತಿದ್ದೇವೆ. ಮೈಸೂರು, ಕೊಳ್ಳೇಗಾಲ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಶಿಡ್ಲಘಟ್ಟ ತಾಲ್ಲೂಕಿನಿಂದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಲೋಕಕಲ್ಯಾಣ, ಮದುವೆ ವಿಳಂಬಕ್ಕೆ ಅಡೆತಡೆ, ಕುಜಶಾಂತಿ ನಿವಾರಣೆ ಉದ್ದೇಶದಿಂದ ಉಚಿತವಾಗಿ ಮಹಾಕಾಳ ಸರ್ಪಯಾಗ ಹಾಗೂ ಶ್ರೀಲಕ್ಷ್ಮೀ ಪೂಜೆಯನ್ನು ನಡೆಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗವಹಿಸಿರುವವರಿಗೆ ತಿಂಡಿ ಹಾಗೂ ಪ್ರಸಾದವನ್ನು ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ವಿ.ಮುನಿಯಪ್ಪ, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಎಂ.ದಯಾನಂದ್, ನಗರಸಭಾ ಸದಸ್ಯರಾದ ಮಂಜುನಾಥ್, ಎಲ್.ಅನಿಲ್ ಕುಮಾರ್, ಆಯುಕ್ತ ಚಲಪತಿ, ಚಲನಚಿತ್ರ ನಿರ್ದೇಶಕ ಆರ್.ಚಂದ್ರು, ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಶೈಲಜಾ ಮುನಿಸ್ವಾಮಿ, ರಾಮಚಂದ್ರಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ನಗರ್ತ ಮಂಡಳಿ ಅಧ್ಯಕ್ಷ ಕೆ.ಆರ್.ಶಿವಶಂಕರ್, ಆರ್.ಮಲ್ಲಿಕಾರ್ಜುನ, ಮುಖೇಶ್, ಮಂಜುನಾಥ, ಮುರಳಿ, ಆರ್.ಎನ್.ಮನೋಜ್, ಬಿ.ಸಿ.ನಂದೀಶ್ ಹಾಜರಿದ್ದರು.
- Advertisement -
- Advertisement -
- Advertisement -