ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘದ (ಎಂ.ಪಿ.ಸಿ.ಎಸ್) 13 ಮಂದಿ ನಿರ್ದೇಶಕರ ಚುನಾವಣಾ ಫಲಿತಾಂಶ ಹೊರಬಂದಿದ್ದು, ಎಲ್ಲರೂ ಜೆಡಿಎಸ್ ಬೆಂಬಲಿತರೇ ಆಯ್ಕೆಯಾಗುವುದರೊಂದಿಗೆ ಎಂ.ಪಿ.ಸಿ.ಎಸ್, ಜೆಡಿಎಸ್ ಪಾಲಾಗಿದೆ.
ಒಟ್ಟು 13 ಸ್ಥಾನಗಳಲ್ಲಿ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಎರಡು ನಿರ್ದೇಶಕರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು ಎಂದು ಚುನಾವಣಾಧಿಕಾರಿ ಗೋಪಾಲಕೃಷ್ಣ ತಿಳಿಸಿದ್ದಾರೆ.
ಆಯ್ಕೆಯಾದ ನಿರ್ದೇಶಕರು : ಎನ್.ಎಂ.ಕೃಷ್ಣಪ್ಪ (64 ಮತಗಳು), ಎಂ.ಎನ್.ನಿತ್ಯಾನಂದಶೆಟ್ಟಿ (57 ಮತಗಳು), ಅವಿರೋಧವಾಗಿ ಆಯ್ಕೆಯಾದವರು : ಎಂ.ಶ್ರೀನಿವಾಸ್, ಕೆ.ಎನ್.ಬಚ್ಚೇಗೌಡ, ಎಚ್.ಎಂ.ನಾರಾಯಣಸ್ವಾಮಿ, ಬಿ.ಕೆಂಪೇಗೌಡ, ಎಸ್.ಟಿ.ಸುರೇಶ್, ಎಂ.ಎನ್.ಶಿವಕುಮಾರ್, ಎಂ.ಎಸ್.ರಮೇಶ್, ಗುಣಮ್ಮ, ನಾಗವೇಣಿ, ಎಂ.ಆರ್.ಬಿಂದು ಮಾದವ, ಎನ್.ನಾಗರಾಜ್.
- Advertisement -
- Advertisement -
- Advertisement -