ಸೀರೆಯನ್ನು ಕಚ್ಚೆಕಟ್ಟಿ, ದಾವಣಿಯನ್ನು ಸೊಂಟಕ್ಕೆ ಕಟ್ಟಿ ‘ಕಬಡ್ಡಿ, ಕಬಡ್ಡಿ’ ಎನ್ನುತ್ತಾ ಗ್ರಾಮೀಣ ಮಹಿಳೆಯರು ಆಡುತ್ತಿದ್ದರೆ, ಪ್ರೇಕ್ಷಕರ ಕೇಕೆ, ಶಿಳ್ಳೆಗಳು ಮೈ ನವಿರೇಳಿಸುವಂತಿತ್ತು.
ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗುರುವಾರ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2016–17ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವದಲ್ಲಿ ಈ ಚಿತ್ರಣ ಕಂಡುಬಂದಿತು.
ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಸಂತೋಷ ಪಟ್ಟರು.
ಪುರುಷರಿಗಾಗಿ ವಾಲಿಬಾಲ್, ಮೂರು ಕಾಲು ಓಟ, ಬ್ಯಾಕ್ ವರ್ಡ್ ರೇಸ್, ಗೋಣಿ ಚೀಲ ಓಟ, ಸ್ಲೋ ಸೈಕಲ್ ರೇಸ್, ಮಹಿಳೆಯರಿಗಾಗಿ ಕಬಡ್ಡಿ, ಮ್ಯೂಜಿಕಲ್ ಚೇರ್, ಬ್ಯಾಕ್ ವರ್ಡ್ ರೇಸ್, ಲೆಮೆನ್ ಸ್ಪೂನ್ ಸ್ಪರ್ಧೆ ಆಯೋಜಿಸಲಾಗಿತ್ತು.
ಗುಂಪು ಸ್ಪರ್ಧೆಗೆ ಮೊದಲ ಬಹುಮಾನವಾಗಿ ಎರಡು ಸಾವಿರ ರೂ ಬಹುಮಾನ, ಒಂದು ಸಾವಿರ ರೂಗಳ ಬಹುಮಾನ ನೀಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಮೂರ್ತಿ, ಕಾರ್ಯದರ್ಶಿ ಶ್ರೀನಿವಾಸ್, ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ರುದ್ರಪ್ಪ, ಮುಷ್ಟಾಕ್, ಶ್ರೀನಿವಾಸ್, ಜನಾರ್ಧನ್, ಆನಂದ್, ರವಿಪ್ರಕಾಶ್, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕ ಚಾಂದ್ ಪಾಷ, ನರಸಿಂಹಮೂರ್ತಿ, ಚನ್ನಕೇಶವ ಹಾಜರಿದ್ದರು.
- Advertisement -
- Advertisement -
- Advertisement -
- Advertisement -