32.1 C
Sidlaghatta
Monday, March 27, 2023

ಯುವಶಕ್ತಿ ಮತ್ತು ನಲ್ಲೋಜನಹಳ್ಳಿ ಗ್ರಾಮಸ್ಥರಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನಾದ್ಯಂತ ಮಳೆ ಬಿದ್ದು ನೆಲ ಹದವಾಗಿದ್ದು ಆದಷ್ಟು ಗಿಡಗಳನ್ನು ನೆಡುವ ಮೂಲಕ ಮುಂದಿನ ದಿನಗಳಿಗೆ ನಾವು ಹಸಿರು ಕಾಣಿಕೆಯನ್ನು ನೀಡಬೇಕೆಂದು ಯುವಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕಹಳ್ಳಿ ಪಂಚಾಯ್ತಿ ಅಗ್ರಹಾರ ಕೆರೆಯ ಗಡಿಯ ಆಸುಪಾಸಿನಲ್ಲಿ ಯುವಶಕ್ತಿ ಸಂಘಟನೆ ಮತ್ತು ನಲ್ಲೋಜನಹಳ್ಳಿ ಗ್ರಾಮಸ್ಥರು ಜೊತೆಗೂಡಿ ಶನಿವಾರ ಮತ್ತು ಭಾನುವಾರ ವಿವಿಧ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆರೆಗಳನ್ನು ಸಂರಕ್ಷಿಸುವುದರೊಂದಿಗೆ ಕೆರೆಗಳ ಆಸುಪಾಸಿನಲ್ಲಿ ವಿವಿಧ ಗಿಡಗಳನ್ನು ಬೆಳೆಸಬೇಕು. ನೀರನ್ನು ಹಿಡಿದಿಡುತ್ತಾ, ಹಕ್ಕಿಗಳಿಗೆ ಕ್ರಿಮಿಕೀಟಗಳಿಗೆ ಅವು ಆಸರೆಯಾಗುತ್ತವೆ. ಯುವಶಕ್ತಿ ಸಂಘಟನೆಯ ಸದಸ್ಯರೆಲ್ಲರೂ ಉದ್ಯೋಗದಲ್ಲಿರುವವರೆ. ಆದರೂ ಶನಿವಾರ ಮತ್ತು ಭಾನುವಾರ ತಾಲ್ಲೂಕಿನಲ್ಲಿ ಹಸಿರನ್ನು ಬೆಳೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.
ಅರಳಿ, ಆಲ, ಹತ್ತಿ ಮತ್ತು ನೇರಳೆಯ 70 ಗಿಡಗಳನ್ನು ನೆಟ್ಟು ರಕ್ಷಣೆಗಾಗಿ ಮುಳ್ಳು ಬೇಲಿಯನ್ನು ಹಾಕಲಾಯಿತು.
ನಲ್ಲೋಜನಹಳ್ಳಿಯ ಬಾವರೆಡ್ಡಿ, ಎ.ನರಸಿಂಹಮೂರ್ತಿ, ಎಂ.ಲಕ್ಷ್ಮಣರೆಡ್ಡಿ, ಆರ್. ಮಂಜುನಾಥ, ಶಿವಪ್ಪ ಹಾಜರಿದ್ದರು.
 

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!