ರಾಜ್ಯ ಮಡಿವಾಳ ಸಂಘಕ್ಕೆ ಆಯ್ಕೆ

- Advertisement -
- Advertisement -

ತಾಲ್ಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಡಿವಾಳ ಸಂಘಕ್ಕೆ ಸದಸ್ಯರೊಬ್ಬರು ಶಿಡ್ಲಘಟ್ಟದಿಂದ ಆಯ್ಕೆಯಾಗಿರುವುದು ಒಂದು ಸಾಧನೆ ಎಂದು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ವಿ.ರಾಜಣ್ಣ ತಿಳಿಸಿದರು.
ತಾಲ್ಲೂಕು ಮಡಿವಾಳ ಮಾಚಿದೇವ ಯುವಕರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಜನಾಂಗದವರ ಏಳಿಗೆಗಾಗಿ ಶ್ರಮಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಲು ನೆರವಾಗುತ್ತೇನೆ. ಸಮಾಜದಲ್ಲಿ ನಮ್ಮ ಜನಾಂಗ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನೆಲೆ ನಿಲ್ಲಲು ಪ್ರಯತ್ನಿಸುತ್ತೇನೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಮಡಿವಾಳ ಸಂಘದ ಸದಸ್ಯರು ರಾಜ್ಯ ಮಡಿವಾಳ ಸಂಘಕ್ಕೆ ಆಯ್ಕೆಯಾದ ಆರ್.ವಿ.ರಾಜಣ್ಣ ಅವರನ್ನು ಗೌರವಿಸಿದರು.
ಮಡಿವಾಳ ಸಂಘದ ಎಚ್.ಕೆ.ಶ್ರೀನಿವಾಸ್, ಎನ್.ರಾಜು, ಎಂ.ದೇವರಾಜ್, ಚಿಕ್ಕನಂಜಪ್ಪ, ವೆಂಕಟರಾಯಪ್ಪ, ಡಿ.ವಿ.ಕೃಷ್ಣಪ್ಪ, ಜಿ.ಎನ್.ಹನುಮಂತರಾಯಪ್ಪ, ಎಚ್.ಎಂ.ಮುನಿರಾಜು, ಎಚ್.ಸಿ.ರಮೇಶ್, ವಿ.ರವೀಂದ್ರನಾಥ್, ಸುರೇಶ್, ದೊಡ್ಡ ಹೇಮಣ್ಣ, ದೇವರಾಜ್, ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!