24.2 C
Sidlaghatta
Sunday, October 12, 2025

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಚೆಕ್ ವಿತರಣೆ

- Advertisement -
- Advertisement -

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ತಾಲ್ಲೂಕಿನ ಮೂವರು ಮಹಿಳೆಯರಿಗೆ ತಲಾ 20 ಸಾವಿರ ರೂಪಾಯಿಗಳ ಸಹಾಯಧನವನ್ನು ಚೆಕ್ ಮೂಲಕ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೋಮವಾರ ವಿತರಿಸಿದರು.
ಕೆ.ಕೆ.ಪೇಟೆಯ ನಾಗರತ್ನಮ್ಮ, ಯರ್ರನಾಗೇನಹಳ್ಳಿಯ ಮಂಜುಳಮ್ಮ ಮತ್ತು ಹೇಮಾರ್ಲಹಳ್ಳಿಯ ಮೀನಮ್ಮ ಫಲಾನುಭವಿಗಳಾಗಿದ್ದು, ಇದರೊಂದಿಗೆ ಅಂತ್ಯ ಸಂಸ್ಕಾರ ಪರಿಹಾರ ನಿಧಿ ಯೋಜನೆಯಡಿ ಯರ್ರನಾಗೇನಹಳ್ಳಿಯ ಮಂಜುಳಮ್ಮ ಅವರಿಗೆ 1000 ರೂಪಾಯಿಗಳ ಚೆಕ್ ಕೂಡ ನೀಡಲಾಯಿತು.
ಬಡತನ ರೇಖೆಗಿಂತ ಕೆಳಗೆ ಇರುವ, ಕುಟುಂಬದ ಮುಖ್ಯಸ್ಥನ ಮರಣವಾಗಿರುವುದರಿಂದ ಈ ಸಹಾಯಧನ ಕೇಂದ್ರ ಸರ್ಕಾರದ ಮೂಲಕ ಲಭಿಸುತ್ತಿದ್ದು, ಕುಟುಂಬಕ್ಕೆ ಕೊಂಚ ಮಟ್ಟಿನ ಆರ್ಥಿಕ ಚೇತರಿಕೆಯನ್ನು ನೀಡಲಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ತಿಳಿಸಿದರು. ರಾಜಸ್ವ ನಿರೀಕ್ಷಕ ಸುಬ್ರಮಣಿ ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!