23.1 C
Sidlaghatta
Tuesday, December 30, 2025

ವಸಾಪ ತಾಲ್ಲೂಕು ಘಟದಿಂದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕವಿಗೋಷ್ಥಿ ಕಾರ್ಯಕ್ರಮ

- Advertisement -
- Advertisement -

ನಗರದ ಖಾಜಿ ರಸ್ತೆಯಲ್ಲಿರುವ ಶಿಕ್ಷಕರಾದ ಶಹನಾಜ್ ಬೇಗ್ ಮತ್ತು ಫಾತಿಹಾಭಾನು ದಂಪತಿಯ ಮನೆಯಲ್ಲಿ ವಸಾಪ ತಾಲ್ಲೂಕು ಘಟದಿಂದ ಆಯೋಜಿಸಿದ್ದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕವಿಗೋಷ್ಥಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಶಿಕ್ಷಕ ಸುಂದರನ್ ಮಾತನಾಡಿದರು.
ಕನ್ನಡ ಸಿನಿಮಾ ಹಾಡುಗಳು ಸಹ ಭಾಷೆಯ ಬೆಳವಣಿಗೆಗೆ ತಮ್ಮದೇ ಕಾಣಿಕೆಗಳನ್ನು ನೀಡಿವೆ. ಹಿರಿಯ ನಟ ರಾಜ್ ಕುಮಾರರು ತಮ್ಮ ಸಿನೆಮಾ ಮತ್ತು ಬದುಕಿನ ಮೂಲಕ ಕನ್ನಡಿಗರಿಗೆ ಸಾಮಾಜಿಕ ನಡವಳಿಕೆ, ಭಾಷೆ ಪ್ರೇಮ, ವಿನಯತೆ, ಒಳ್ಳೆಯತನವನ್ನು ಕಲಿಸಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಕಾಲದವರು ಬಹುತೇಕರು ಸಿನೆಮಾಗಳಿಂದ ಪ್ರಭಾವಿತರಾದವರು. ಆಗೆಲ್ಲಾ ಸಿನೆಮಾಗಳೇ ಸಾಮಾಜಿಕ ಸಂದೇಶ ಸಾರುತ್ತಿದ್ದವು. ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿದ್ದವು. ಎಷ್ಟೋ ಕವಿಗಳ ಕವನಗಳು ಸಿನೆಮಾ ಮಾಧ್ಯಮದ ಮೂಲಕ ಅನಕ್ಷರಸ್ಥರಿಗೂ ಪರಿಚಿತವಾಗಿತ್ತು. ಇದೂ ಕೂಡ ಕನ್ನಡ ಸೇವೆಯೇ ಎಂದು ಅವ್ರು ಅಭಿಪ್ರಾಯಪಟ್ಟರು.
ಕವಿಗಳಾದ ಲಕ್ಷ್ಮೀನಾರಾಯಣಗೌಡ, ವೇಣುಗೋಪಾಲ್, ಪ್ರಕಾಶ್, ಎಸ್.ವಿ.ನಾಗರಾಜರಾವ್, ಸುಂದರಾಚಾರಿ, ರಾಮಮೂರ್ತಿ, ಪ್ರಕಾಶ್, ಜಿ.ಎನ್.ಶಾಮಸುಂದರ್, ಸುಮನ್, ಟಿ.ಟಿ.ನರಸಿಂಹಪ್ಪ, ನಾರಾಯಣಸ್ವಾಮಿ ಕವನ ವಾಚಿಸಿದರು. ಸಂಗೀತ ಶಿಕ್ಷಕ ಎಸ್.ವಿ.ರಾಮಮೂರ್ತಿ ವಚನಗೀತೆಗಳ ಗಾಯನ ನಡೆಸಿಕೊಟ್ಟರು. ಪಿಟೀಲು ವಾದನವನ್ನು ಜಿ.ಎನ್.ಶಾಮಸುಂದರ್ ಮೃದಂಗವನ್ನು ಎಸ್.ಎನ್.ಲಕ್ಷ್ಮಿನಾರಾಯಣ ನುಡಿಸಿದರು. ಶಹನಾಜ್ ಬೇಗ್ ಮತ್ತು ಫಾತಿಹಾಭಾನು ದಂಪತಿಯನ್ನು ಗೌರವಿಸಲಾಯಿತು. ವಸಾಪ ತಾಲ್ಲೂಕು ಘಟದ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!