31.1 C
Sidlaghatta
Saturday, April 20, 2024

ವಾಸವಿ ಶಾಲೆಯಲ್ಲಿ ಭಾವಗೀತೆ, ಜನಪದ ಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ

- Advertisement -
- Advertisement -

ಸ್ಪರ್ಧೆಗಳು ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ಹೆಚ್ಚಿಸಿ ಸೃಜನಶೀಲತೆಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಕ್ಷೇತ್ರ ಶಿಕ್ಷ್ಷಣಾಕಾರಿ ಎಸ್.ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ನಗರದ ವಾಸವಿ ಶಾಲೆಯಲ್ಲಿ ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಹಮ್ಮಿಕೊಂಡಿದ್ದ ಜನಪದ ಗೀತೆ, ಬಾವಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಾಹಿತ್ಯಾತ್ಮಕ ಸ್ಪರ್ಧೆಗಳನ್ನು ನಡೆಸುವುದರಿಂದ ಮಕ್ಕಳು ಆಲೋಚನೆಗೆ ಬೀಳುತ್ತಾರೆ. ಆಲೋಚನೆಗಳಿಂದ ಹೊಸ ಹೊಸ ಚಿಂತನೆಗಳಿಗೆ ಅವರ ಮನಸು ತೆರೆದುಕೊಂಡು ಮಾನಸಿಕ ವಿಕಸನಕ್ಕೆ ದಾರಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್ರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ಮೂರ್ತಿ, ಮಂಜುನಾಥ್, ನಾರಾಯಣಸ್ವಾಮಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಎಂ.ಆರ್.ಗೋಪಿನಾಥ್, ಕೆಂಪಣ್ಣ, ವಿನಾಯಕ, ಟಿ.ಎನ್.ವಿಜಯ್ಕುಮಾರ್, ಎಸ್.ವಿ.ಮಾಲತಿ, ಎಂ.ಆರ್.ಶಂಕರ್ನಾರಾಯಣರಾವ್, ಅನಂತಲಕ್ಷ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜೇತರು:
ಜನಪದಗೀತೆ ವಿಭಾಗದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯ ಮೋನಿಕಾ(ಪ್ರಥಮ), ವಾಸವಿ ಶಾಲೆಯ ವಿದ್ಯಾಶ್ರೀ(ದ್ವಿತೀಯ), ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೋನಿಕಾ(ತೃತೀಯ) ಸ್ಥಾನಪಡೆದಿದ್ದಾರೆ.
ಭಾವಗೀತೆ ವಿಭಾಗದಲ್ಲಿ ವಾಸವಿ ಶಾಲೆಯ ಎಸ್.ಅನುಷಾ(ಪ್ರಥಮ), ಸರಸ್ವತಿ ಕಾನ್ವೆಂಟ್ನ ಮೋನಿಕಾಯಾದವ್(ದ್ವಿತೀಯ), ಆಶಾಕಿರಣ ಅಂಧಮಕ್ಕಳ ಶಾಲೆಯ ಜಾಸ್ಮಿನ್ ತಾಜ್(ತೃತೀಯ) ಬಹುಮಾನವನ್ನು ತನ್ನದಾಗಿಸಿಕೊಂಡರು.
ರಸಪ್ರಶ್ನೆ ವಿಭಾಗದಲ್ಲಿ ಜಂಗಮಕೋಟೆಯ ಕಾರ್ತಿಕ್ಕುಮಾರ್ ಮತ್ತು ತಂಡ(ಪ್ರಥಮ), ವಾಸವಿ ಶಾಲೆಯ ಕೆ.ಎಂ.ಮಧು ಮತ್ತು ತಂಡ(ದ್ವಿತೀಯ) ಹಾಗೂ ಡಾಲಿನ್ ಶಾಲೆಯ ಕೈಲಾಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!