ವಿಧವೆಯರು ಮತ್ತು ದೈಹಿಕವಾಗಿ ಅಂಗವಿಕಲರು ಹಾಗೂ ಅತ್ಯಂತ ಬಡ ಕುಟುಂಬಗಳಿಗೆ ಮಂಗಳವಾರ ಸಿಲ್ಸಿಲಾ-ಇ-ಅಮೀರಿಯಾ, ಹಬೀಬಿ ಫೌಂಡೇಶನ್ ಶಿಡ್ಲಘಟ್ಟ ಶಾಖೆಯ ವತಿಯಿಂದ ಒಟ್ಟು 300 ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಸಾಂಕೇತಿಕವಾಗಿ ಹನ್ನೂಂದು ಮಂದಿಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಷ್ಟಕರ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವ ಸಂಘಟನೆಯ ಸದಸ್ಯರಿಗೆ ಅಭಿನಂದಿಸಿ, ಈ ಸೇವಾ ಕಾರ್ಯವನ್ನು ಮುಂದುವರೆಸುವಂತೆ ತಿಳಿಸಿ, ಸರ್ಕಾರದ ಎಲ್ಲಾ ಆದೇಶಗಳನ್ನು ಪಾಲಿಸುವಂತೆ ಜನರಿಗೆ ಸಲಹೆ ನೀಡಿದರು.
“ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾಕಿಂಗ್ ಸಂದರ್ಭದಲ್ಲಿ ತೊಡಗಿರುವ ಎಲ್ಲಾ ಸ್ವಯಂಸೇವಕರು ಮಾಸ್ಕ್ ಮತ್ತು ಕೈಗವಸುಗಳನ್ನು ಬಳಸಿದ್ದಾರೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಅಂತರವನ್ನು ಕಾಯ್ದುಕೊಳ್ಳಲು ನಾವು ಅಗತ್ಯವಿರುವ ಜನರ ಮನೆಗಳಿಗೇ ಹೋಗಿ ದಿನಸಿ ಕಿಟ್ಗಳನ್ನು ವಿತರಿಸಲು ನಿರ್ಧರಿಸಿದ್ದೇವೆ” ಎಂದು ಶಹಬುದ್ದೀನ್ ಮತ್ತು ಖದೀರ್ ಷರೀಫ್ ಹೇಳಿದರು.
ಸಲೀಂ ಶಸಾಬ್, ಅಮೀರ್ ಜಾನ್ ಶಸಾಬ್, ನೂರಾನಿ ಶಸಾಬ್, ನಗರಸಭೆ ಸದಸ್ಯ ಮೌಲಾ, ಶಹಬುದ್ದೀನ್, ಜಿ.ರೆಹಮಾನ್, ಖದೀರ್ ಷರೀಫ್, ಸಾದಿಕ್ ಪಾಷಾ ಮತ್ತು ಸಿಲ್ಸಿಲಾ-ಇ-ಅಮೀರಾ ಸದಸ್ಯರು ಹಾಜರಿದ್ದರು.