ನಗರದ ಕೋಟೆ ವೃತ್ತದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿಯ ವತಿಯಿಂದ ಪಂಜಾಬ್ನ ಪಠಾಣ್ಕೋಟ್ ಪ್ರದೇಶದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ ದೇಶಕ್ಕಾಗಿ ಪ್ರಾಣ ನೀಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು.
ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ಸಮಾನ ಮನಸ್ಕರ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ದೇಶ ರಕ್ಷಣೆಗಾಗಿ ಗಡಿಭಾಗಗಳಲ್ಲಿ ಪ್ರತಿನಿತ್ಯ ಕಾಯುವಂತಹ ಯೋಧರು ಮೃತಪಟ್ಟಾಗ ಅವರ ಕುಟುಂಬಗಳಿಗೆ ರಕ್ಷಣೆ ಹಾಗೂ ಜೀವನೋಪಾಯವನ್ನು ಒದಗಿಸಿಕೊಡುವಂತಹ ಪ್ರಾಮಾಣಿಕವಾದ ಕೆಲಸವನ್ನು ಮಾಡಬೇಕು ಎಂದರು.
ನಗರಠಾಣೆಯ ಸಬ್ ಇನ್ಸ್ಪೆಕ್ಟರ್ ಆರ್.ವಿಜಯ್ ಮಾತನಾಡಿ, ದೇಶಕ್ಕಾಗಿ ಪ್ರತಿನಿತ್ಯ ಹೋರಾಟ ಮಾಡಿ ಉಗ್ರಗಾಮಿಗಳೊಂದಿಗೆ ಸೆಣಸಾಡುತ್ತಿರುವ ಯೋಧರನ್ನು ಗೌರವಿಸುವಂತಹ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ದೇಶದ ಗಡಿಭಾಗದಲ್ಲಷ್ಟೆ ಅಲ್ಲದೆ ದೇಶದೊಳಗೂ ಅಕ್ರಮ ಚಟುವಟಿಕೆಗಳು ನಡೆಸದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು.
ಶ್ರದ್ಧಾಂಜಲಿಯ ಅಂಗವಾಗಿ ಮೇಣದ ಬತ್ತಿಗಳನ್ನು ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಮೃತ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್, ರೈತ ಸಂಘದ ಜಿಲ್ಲಾ ಸಂಚಾಲಕ ಹುಸೇನ್ಸಾಬ್, ತಾಲ್ಲೂಕು ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಮೌಲಾ, ಎ.ಎಂ.ತ್ಯಾಗರಾಜ್, ಪುರುಷೋತ್ತಮ್, ದೇವರಾಜು(ದೇವಿ), ದೇವರಮಳ್ಳೂರು ಕೃಷ್ಣಪ್ಪ, ಎಸ್.ಎಂ.ರಮೇಶ್, ಜಯಂತಿ ಗ್ರಾಮ ದೇವರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -