ಶ್ರೀಸಾಯಿನಾಥಜ್ಞಾನ ಮಂದಿರದ ವಾರ್ಷಿಕೋತ್ಸವ: ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಮಳ್ಳೂರು ಸಮೀಪದ ಬಟ್ರೇನಹಳ್ಳಿಯ ಶ್ರೀಸಾಯಿನಾಥಜ್ಞಾನ ಮಂದಿರದ ೧೨ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಲ್ಲಿ ದೇವಸೇನೆ ಸಮೇತ ಸುಬ್ರಮಣ್ಯಸ್ವಾಮಿಯ ಕಲ್ಯಾಣೊತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶ್ರೀಸಾಯಿನಾಥ ಜ್ಞಾನ ಮಂದಿರದ ೧೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀಬಾಬಾ ರವರ ಪಲ್ಲಕ್ಕಿಯ ಉತ್ಸವವನ್ನು ಗುರುವಾರ ನಡೆಸಲಾಯಿತು. ಜ್ಞಾನ ಮಂದಿರದ ಸಮೀಪ ಇರುವ ಭಟ್ರೇನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಹಾಗೂ ಗ್ರಾಮ ಪ್ರದಕ್ಷಿಣೆ ನೆರವೇರಿಸಲಾಯಿತು.
ಡೋಲು ಭಾಜ ಭಜಂತ್ರಿ ನಾದಸ್ವರ ಹಾಗೂ ಕಳಶಹೊತ್ತ ಹೆಂಗಳೆಯರು, ಮುತ್ತೈದೆಯರು ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದರು. ಭಕ್ತರ ತಂಡವೇ ನಡೆಸಿಕೊಟ್ಟ ಕೋಲಾಟ ಭಕ್ತರನ್ನು ಭಕ್ತಿ ಸಾಗರದಲ್ಲಿ ತೇಲುವಂತೆ ಮಾಡಿತು.
ಬಾಬಾಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಮುಕ್ತಿನಾಗ ದೇವಾಲಯದ ಗುರು ಮಾತಾಜಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಶಾಂತಿ ನೆಮ್ಮದಿ ಎಲ್ಲೋ ಇಲ್ಲ ಅದು ನಮ್ಮಲ್ಲೆ ಇದೆ. ಆದರೆ ಅದನ್ನು ಭಕ್ತಿ ಮಾರ್ಗದಲ್ಲಿ ಹುಡುಕಿದಾಗಲೆ ಸಿಗಲಿದೆ ಎಂದರು.
ತಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆಯೂ ಭಗವಂತನ ಧ್ಯಾನದಿಂದ, ಭಕ್ತಿ ಮಾರ್ಗದಿಂದ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದೆ ಎಂದರು.
ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ತೀರ್ಥ ಪ್ರಸಾದ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ನೈವೇದ್ಯದ ಪ್ರಸಾದವನ್ನು ಸ್ವೀಕರಿಸಿದರು.
ದೇವಾಲಯದ ಸಮಿತಿಯ ಮುಖ್ಯಸ್ಥರಾದ ನಾರಾಯಣಸ್ವಾಮಿ, ಸೀತಾರಾಮರೆಡ್ಡಿ, ಗೋಪಾಲಪ್ಪ, ದೇವರಾಜ್, ಸೊಣ್ಣಪ್ಪ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!