19.5 C
Sidlaghatta
Sunday, July 20, 2025

ಶ್ರೀ ರಾಮ, ಬಸವಣ್ಣ ಹಾಗು ಮಾರೆಮ್ಮ ದೇವಿಯ ಜಾತ್ರೆ

- Advertisement -
- Advertisement -

ನಗರದ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ಮತ್ತು ಕರಗದಮ್ಮ ದೇವಿ ಸೇರಿದಂತೆ ಉಲ್ಲೂರುಪೇಟೆಯ ಶ್ರೀ ರಾಮ, ಬಸವಣ್ಣ ಹಾಗು ಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಎರಡು ದಿನಗಳ ಕಾಲ ಭಾರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಕಾಲದಲ್ಲಿ ಮಳೆ ಬೆಳೆಯಾಗಲೆಂದು ಸೋಮವಾರ ಹಾಗು ಮಂಗಳವಾರ ಎರಡು ದಿನಗಳ ಕಾಲ ಗ್ರಾಮದೇವತೆಗಳಿಗೆ ತಂಬಿಟ್ಟು ದೀಪಗಳನ್ನು ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ಕಾಲ್ನಿಡಿಗೆಯ ಮೂಲಕ ದೇವಾಲಯದ ವರೆಗೂ ಹೋಗಿ ತಂಬಿಟ್ಟು ದೀಪಗಳನ್ನು ಬೆಳಗುವ ಮೂಲಕ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಿ ಜಾತ್ರೆ ಆಚರಿಸಿದರು.

ಗ್ರಾಮದೇವತೆ ಶ್ರೀ ಗಂಗಮ್ಮದೇವಿ ಜಾತ್ರೆಯ ಪ್ರಯುಕ್ತ ನಗರದ ಕಾಮಾಟಿಗರ ಪೇಟೆಯಲ್ಲಿರುವ ಶ್ರೀ ಗಂಗಮ್ಮ ದೇವಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರದ ಬಹುತೇಕ ರಸ್ತೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು ಎಲ್ಲಾ ಮನೆಗಳಲ್ಲಿಯೂ ಕೂಡಾ ಹಬ್ಬದ ಸಂಭ್ರಮ ಸಡಗರಗಳಿಂದ ತುಂಬಿತ್ತು, ಜಾತ್ರೆಯ ಅಂಗವಾಗಿ ಬಂದಿದ್ದ ಸಂಬಂಧಿಕರಿಗೆ ಹಬ್ಬದೂಟ (ಬಾಡೂಟ) ಬಡಿಸಿ ಅದ್ದೂರಿಯಾಗಿ ಜಾತ್ರೆ ಆಚರಿಸಿದರು.
ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯು ಬಹಳ ವಿಶೇಷತೆ ಹೊಂದಿದ್ದು ಪ್ರತಿ ಬಾರಿಯೂ ಕೂಡಾ ತಂಬಿಟ್ಟು ದೀಪಗಳನ್ನು ಮಾಡಿ ಜಾತ್ರೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆಯಾಗಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!