ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಗಟೂರು ಜನರು ಗ್ರಾಮದ ರಸ್ತೆಗಳನ್ನೆಲ್ಲಾ ಸಂಪೂರ್ಣ ಬಂದ್ ಮಾಡಿದ್ದಾರೆ.
ಈ ಹಿಂದೆ ಪ್ಲೇಗ್, ಸಿಡುಬು, ದಡಾರದಂತಹ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡಿದ್ದ ವೇಳೆ ಇಡೀ ಊರನ್ನೆ ತ್ಯಜಿಸಿ ಹೊರಗೆ ಬದುಕಿದ್ದ ಹಿರಿಯ ಅನುಭವಿಗಳು ಕೊರೊನಾ ಸೋಂಕು ಹರಡದಿರಲು ಊರಿನ ಹೊರಗಿನಿಂದ ಒಳಗೆ, ಊರಿನಿಂದ ಹೊರಗೆ ಯಾರೂ ಹೋಗದಂತೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ.
ಈಗಾಗಲೇ ಊರಿನಲ್ಲಿ ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗಿದೆ. ಯಾರೂ ಇಬ್ಬರಿಗಿಂತ ಹೆಚ್ಚುಮಂದಿ ಒಂದೆಡೆ ಗುಂಪು ಸೇರಬಾರದು. ಮನೆಯಿಂದ ಹೊರಗೆ ಹೆಚ್ಚು ಬರಬಾರದು. ವಾಹನಗಳಲ್ಲಿ ಯಾರೂ ಸಂಚರಿಸಬಾರದು ಎಂದು ಅರಿವು ಮುಡಿಸಲಾಗಿದೆ. ಮನೆಗಳ ಬಳಿ ಸ್ವಯಂ ಆಸಕ್ತಿಯಿಂದ ಸ್ವಚ್ಚತೆ ಕಾಯ್ದುಕೊಳ್ಳಬೇಕು. ಪರಸ್ಪರ ಸಾಮಾಜಿಕ ಅಂತಕಾಯ್ದುಕೊಳ್ಳಬೇಕು ಎನ್ನುತ್ತಾರೆ ಹಿರಿಯರಾದ ನಾರಾಯಣಸ್ವಾಮಿ.
ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ ಮಾತನಾಡಿ, ಯಾರೂ ಅನವಶ್ಯಕವಾಗಿ ರಸ್ತೆಗಳಲ್ಲಿ ಬಾರದೇ ಮನೆಯಲ್ಲಿಯೇ ಇರಬೇಕು. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರಂತೆ ಎಲ್ಲರೂ ಅವರವರ ಕರ್ತವ್ಯವನ್ನು ಕೊರೊನಾ ವೈರಸ್ ತೊಲಗಿಸಲು ಸೈನಿಕರಂತೆ ಸೇವೆ ಸಲ್ಲಿಸಬೇಕಿದೆ. ಸ್ವಯಂಜಾಗೃತಿ ಪಡೆದು ಮೋದಿಯವರ, ರಾಜ್ಯಸರ್ಕಾರದ ಕೊರೊನಾ ಹೋಗಲಾಡಿಸುವ ಆಶಯಗಳನ್ನು ಈಡೇರಿಸಬೇಕು. ಇದೇ ನಾವು ದೇಶಕ್ಕಾಗಿ ಸಲ್ಲಿಸುವ ಅಳಿಲುಸೇವೆ ಎಂದು ಭಾವಿಸಬೇಕು ಎಂದರು.
ವರ್ತಕ ಸತೀಶ್ ಮಾತನಾಡಿ, ಎಲ್ಲರಿಗೂ ಅಗತ್ಯವಸ್ತುಗಳೆಲ್ಲಾ ಸಿಗುವಂತೆ ಕ್ರಮಕೈಗೊಳ್ಳಲಾಗುವುದು. ಯಾರೂ ಈ ವಿಷಯದಲ್ಲಿ ಗಾಬರಿ, ಆತಂಕ ಪಡಬಾರದು. ಎಲ್ಲರೂ ಮಾಸ್ಕ್ ಗಳನ್ನು ಧರಿಸಬೇಕು. ಹೀಗೆ ದಗ್ಬಂಧನ ಹೇರಿಕೊಳ್ಳುವುದು ನಮ್ಮ ಊರಿಗೆ ಹೊಸತೇನಲ್ಲ. ವರ್ಷಕ್ಕೊಮ್ಮೆ ನಡೆಯುವ ಇತಿಹಾಸಪ್ರಸಿದ್ಧ ಶ್ರೀ ಸತ್ಯಮ್ಮದೇವಿ ದೇವರ ಮಹಾಮಜ್ಜನ ಕಾರ್ಯಕ್ರಮದ ವೇಳೆ ಒಂದುದಿನ ಪೂರ್ತಿ ಗ್ರಾಮದಲ್ಲಿ ಯಾರೂ ಓಡಾಡದೇ ಅಭ್ಯಾಸವಾಗಿದೆ ಎಂದರು.
ಗ್ರಾಮಪಂಚಾಯಿತಿ ಸದಸ್ಯ ಡಿ.ದೇವರಾಜು ಮಾತನಾಡಿ, ಅಗತ್ಯಸಂದರ್ಭಗಳಲ್ಲಿಯೂ ಚಿಕ್ಕಮಕ್ಕಳು, ವೃದ್ಧರು ಹೊರಬಾರದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಲುಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಬೇಕು. ಎಲ್ಲರೂ ಕಷ್ಟಸುಖಗಳಿಗೆ ಗ್ರಾಮಸ್ಥರು ಪರಸ್ಪರ ವಿನಿಮಯ ಮಾಡಿಕೊಳ್ಳಲು ಮುಂದಾಗಿರುವುದು ಪ್ರಶಂಸನೀಯ ಎಂದರು.
ರಸ್ತೆಗಳಿಗೆ ಅಡ್ಡಲಾಗಿ ಮರ, ಮುಳ್ಳು ಹಾಕುವ ಸಂದರ್ಭದಲ್ಲಿ ಗ್ರಾಮಸ್ಥರಾದ ಚಿಕ್ಕಬಸವರಾಜು, ಸತೀಶ್, ಎಸ್.ಆರ್.ನಾಗೇಶ್, ಎನ್.ಪಿ.ನಾಗರಾಜಪ್ಪ, ಗ್ರಾಮಪಂಚಾಯತಿ ಸದಸ್ಯರುಗಳು ಇದ್ದರು.
- Advertisement -
- Advertisement -
- Advertisement -