ಸಮಾಜದ ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ತಮ್ಮನ್ನು ಬೆಳೆಸಿದ ಸಮಾಜದ ಋಣವನ್ನು ತೀರಿಸುವಂತೆ ಮದೀನ ಮಸೀದಿ ಗುರುಗಳಾದ ಸಲೀಮ್ ಹಜರತ್ ತಿಳಿಸಿದರು.
ನಗರದಲ್ಲಿ ಗುರುವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಶಾಕಿರಣ ಅಂದ ಮಕ್ಕಳ ಶಾಲೆಯ ಮಕ್ಕಳಿಗೆ ಹೊದಿಕೆಗಳನ್ನು ವಿತರಿಸಿ ಅವರು ಮಾತನಾಡಿದರು. ಮನುಷ್ಯನ ಜೀವನ ಕೇವಲ ಹುಟ್ಟು ಸಾವಿಗೆ ಮೀಸಲಿರಿಸದೆ, ತಮ್ಮ ಜೀವನದಲ್ಲಿ ಏನಾದರೂ ಸಾದನೆ ಮಾಡುವ ಮೂಲಕ ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು. ಮಹಮದ್ ಪೈಗಂಬರ್ ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದರು.
ಮಹಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮುಸ್ಲಿಂ ಭಾಂದವರಿಂದ ಹಣ್ಣು ಹಂಪಲು ಹಾಲು ವಿತರಿಸಲಾಯಿತು.
ಜಾಮೀಯ ಮಸೀದಿಯ ಸೈಯದ್ ತಾಜ್ ಪಾಷ, ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಎಚ್.ಅಬ್ದುಲ್ ಸಮದ್, ಎಚ್.ಎಸ್.ಏಜಾದ್ ಅಹ್ಮದ್, ಎಚ್.ಬಾಬು, ಶಕೀಬ್ ಹುಸೇನ್, ಅಮ್ಜದ್ ಪಾಷ, ನಗರಸಭೆ ಸದಸ್ಯ ವೆಂಕಟಸ್ವಾಮಿ, ಜೆ.ವಿ.ಸದಾಶಿವ, ಕೆಂಪರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -







