29.1 C
Sidlaghatta
Sunday, September 24, 2023

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕಲಿಕೆ

- Advertisement -
- Advertisement -

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಜಾನಪದ ಸಂಭ್ರಮ’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.
ತಾಲ್ಲೂಕಿನ ವರದನಾಯಕನಹಳ್ಳಿಯ ಈಧರೆ ತಿರುಮಲ ಪ್ರಕಾಶ್ ಅವರಿಂದ ಡೊಳ್ಳುಕುಣಿತ ಮತ್ತು ಜಾನಪದ ಗಾಯನವನ್ನು ಕಲಿಯುತ್ತಿದ್ದಾರೆ. ವಿಶೇಷವೆಂದರೆ ಕಾಲೇಜು ಹುಡುಗ ಹುಡುಗಿಯರ 25 ಮಂದಿ ತಂಡವು ಡೊಳ್ಳನ್ನು ಲೀಲಾಜಾಲವಾಗಿ ಕಲಿತು, ಬಾರಿಸುತ್ತಾ, ಕಸರತ್ತುಗಳನ್ನು ಮಾಡುತ್ತಾ ಲಯಬದ್ಧವಾಗಿ ಬಾರಿಸುವುದನ್ನು ಕೇವಲ ಹತ್ತೇ ದಿನಗಳಲ್ಲಿ ಕಲಿತಿದ್ದಾರೆ. ಗಂಡುವಾದ್ಯವೆಂದೇ ಹೆಸರಾದ ಡೊಳ್ಳು ಕುಣಿತದ ಈ ತಂಡದಲ್ಲಿ ಹದಿನೈದು ಮಂದಿ ಹೆಣ್ಣುಮಕ್ಕಳೇ ಇದ್ದು, ಡೊಳ್ಳಿನ ನಾದಕ್ಕೆ ತಮ್ಮ ಹೆಜ್ಜೆಯನ್ನು ಹಾಕುತ್ತಾ ತರಬೇತಿ ಪಡೆಯುತ್ತಿದ್ದಾರೆ.
‘ಭರಣಿ ಮಳೆಯೆ ಧರಣಿಗಿಳಿಯಮ್ಮ’ ಎಂಬ ಸ್ವರಚಿತ ಗೀತೆಗೆ ಈಧರೆ ತಿರುಮಲ ಪ್ರಕಾಶ್ ತಾವೇ ಸ್ವರ ಸಂಯೋಜಿಸಿ ವಿದ್ಯಾರ್ಥಿಗಳಿಗೆ ಕಲಿಸುತ್ತಾ ಮಳೆಯು ಧರೆಗಿಳಿಯಬೇಕೆಂಬ ಆಶಾಭಾವನೆಯನ್ನು ಬಿತ್ತುತ್ತಿದ್ದಾರೆ.
ಸುಮಾರು ಹತ್ತು ದಿನಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಈ ವಿದ್ಯಾರ್ಥಿಗಳೆಲ್ಲಾ ಎನ್.ಎಸ್.ಎಸ್ ನಲ್ಲಿರುವವರು. ಹಾಗಾಗಿ ಶಿಸ್ತು ಮೈಗೂಡಿದೆ. ಕಲಿಸುವುದನ್ನು ಸೂಕ್ಷ್ಮಗ್ರಾಹಿಗಳಾಗಿ ಕಲಿಯುತ್ತಿದ್ದಾರೆ. ಜೂನ್ 25 ಮತ್ತು 26 ರಂದು ಪೆದ್ದೂರು ಗ್ರಾಮದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಜಾನಪದ ಸಂಭ್ರಮ’ ಸ್ಪರ್ಧೆಯಲ್ಲಿ ನಾವು ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದೇವೆ’ ಎಂದು ತರಬೇತುದಾರ ಈಧರೆ ತಿರುಮಲ ಪ್ರಕಾಶ್ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!