ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ನಗರಸಭೆಯವರು ವಿವಿಧ ಅಂಗಡಿಗಳ ಮುಂದೆ ಚಾಕ್ ಪೀಸ್ ನಲ್ಲಿ ಗುರುತು ಹಾಕಿ ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ತಿಳಿಹೇಳುತ್ತಿದ್ದಾರೆ.
ಎಲ್ಲೆಡೆ ಕರ್ಫ್ಯೂ ವಿಧಿಸಿರಿರುವುದರಿಂದ ಜೀವನಾವಶ್ಯಕ ವಸ್ತುಗಳನ್ನು ಮಾರುವ ಔಷಧಿ ಅಂಗಡಿಗಳು, ತರಕಾರಿ, ಹಣ್ಣು, ದಿನಸಿ ಮುಂತಾದ ಅಂಗಡಿಗಳಲ್ಲಿ ಜನರು ಆರೋಗ್ಯ ಇಲಾಖೆಯ ಸೂಚನೆಯಂತೆ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಲು ತಿಳಿಹೇಳಲಾಗುತ್ತಿದೆ. ಅದಕ್ಕಾಗಿ ನಗರಸಭೆ ಸಿಬ್ಬಂದಿ ಡ್ಯಾನಿ ಪವನ್, ರವಿಕುಮಾರ್, ಮುನಿರಾಜು ಮುಂತಾದವರು ಚಾಕ್ ಪೀಸ್ ನಲ್ಲಿ ಅಂಗಡಿಗಳ ಮುಂದೆ ಗುರುತು ಹಾಕಿ ಅದರಲ್ಲಿ ನಿಲ್ಲಬೇಕು. ಅಂತರ ಕಾಯ್ದುಕೊಳ್ಳಬೇಕು ಹಾಗೂ ಗ್ರಾಹಕರು ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿಕೊಂಡಿರಬೇಕೆಂದು ತಿಳಿಸಿದರು.
ಈ ರೀತಿ ಚಾಕ್ ಪೀಸ್ ನಲ್ಲಿ ಬರೆದರೆ ಒಂದು ದಿನವೂ ಉಳಿಯುವುದಿಲ್ಲ. ಅದರ ಬದಲು ನಗರಸಭೆಯವರು ಪೇಯಿಂಟ್ ಮಾಡಿಸಿ ಎಂದು ಕೆಲವು ಅಂಗಡಿಗಳವರು ವಿನಂತಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಔಷಧಿ ಅಂಗಡಿಗಳು ಹಾಗೂ ದಿನಸಿ ಅಂಗಡಿಗಳ ಮುಂದೆ ಅದೇ ಗ್ರಾಮದ ಎಂಜಿನಿಯರ್ ಎಂ.ಕೆ. ರವಿ ಪ್ರಸಾದ್ ಅವರು ತಾವೇ ಪೇಯಿಂಟ್ ಖರೀದಿಸಿ ಅಂತರ ಕಾಯುವ ಬಾಕ್ಸ್ ಗುರುತು ಮಾಡಿ ಕರೋನಾ ವೈರಸ್ ತಡೆಗಟ್ಟುವ ಅರಿವು ಮೂಡಿಸಿದರು.
- Advertisement -
- Advertisement -
- Advertisement -