21.1 C
Sidlaghatta
Thursday, July 31, 2025

ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಕೇಳಲು ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮ

- Advertisement -
- Advertisement -

ಕಳೆದ ಬಾರೊಯ ಫೋನ್ ಇನ್ ಕಾರ್ಯಕ್ರಮದಲ್ಲಿ ಹದಿಮೂರು ಕರೆಗಳು ಬಂದಿದ್ದು, ಅವುಗಳಲ್ಲಿ ೧೧ ಕ್ಕೆ ಪರಿಹಾರ ಒದಗಿಸಲಾಗಿದೆ, ಉಳಿದ ಎರಡು ಪರಿಹಾರ ದೊರಕಿಸುವ ಹಂತದಲ್ಲಿದೆ ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಾಲ್ಕನೇ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಹನ್ನೊಂದು ಕರೆಗಳು ಸಾರ್ವಜನಿಕರಿಂದ ಬಂದವು. ಮೊದಲನೇ ಕರೆ ಕುಂದಲಗುರ್ಕಿ ಸಂತೋಷ್ ಮಾಡಿ, ಗ್ರಾಮದ ಸರ್ವೆ ನಂಬರ್ ೪೨ ರಲ್ಲಿ ಕೋಳಿಫಾರಂ ಮಾಡಿದ್ದಾರೆ. ಅದರಿಂದ ಸುತ್ತಮುತ್ತಲಿನ ಮನೆಗಳವರಿಗೆ ತೊಂದರೆಗಳಾಗುತ್ತಿವೆ ಎಂದರು. ಹರಳಹಳ್ಳಿಯ ಸುರೇಶ್, ಹರಳಹಳ್ಳಿ ಮತ್ತು ಎಲ್.ಮುತ್ತುಗದಹಳ್ಳಿಯ ನಡುವೆ ರಾಜಕಾಲುವೆ ಒತ್ತುವರಿಯ ಬಗ್ಗೆ ದೂರಿದರು. ಎದ್ದಲತಿಪ್ಪೇನಹಳ್ಳಿ ಸುರೇಶ್ ಅವರು ಸಾರ್ವಜನಿಕ ಸ್ಮಶಾನದ ಬಗ್ಗೆ ಕೇಳಿದರು.
ಎಲ್.ಮುತ್ತುಗದಹಳ್ಳಿಯ ಮಂಜುನಾಥರೆಡ್ಡಿ, ಗ್ರಾಮದ ರುದ್ರಭೂಮಿ ಸಾಲುತ್ತಿಲ್ಲ ಎಂದು ತಿಳಿಸಿದರು. ವಾರಹುಣಸೇನಹಳ್ಳಿಯ ಸುರೇಶ್ ಆಧಾರ್ ಸಮಸ್ಯೆಯ ಬಗ್ಗೆ ತಿಳಿಸಿದರು. ವಾಸವಿ ರಸ್ತೆಯ ಮೋಹನ್ ಫುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಿಕೊಡುವಂತೆ ಕೋರಿದರು. ಬಚ್ಚಹಳ್ಳಿಯ ಶ್ರೀಕಾಂತ್ ಗ್ರಾಮದ ರಸ್ತೆಯ ಬಗ್ಗೆ ಕೇಳಿದರು.
ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಫೋನ್ ಮೂಲಕ ತಿಳಿಸಿ, ಪರಿಹಾರ ಕಂಡುಕೊಳ್ಳಲಿ ಎಂದು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಈ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ಎಂ.ದಯಾನಂದ್ ಮನವಿ ಮಾಡಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!