17.1 C
Sidlaghatta
Sunday, November 9, 2025

ಸಿಐಟಿಯು ಪದಾಧಿಕಾರಿಗಳ ಮನವಿ

- Advertisement -
- Advertisement -

ಸರ್ಕಾರಿ ಹಾಸ್ಟೆಲ್ ಗಳಲ್ಲಿ ದಿನಗೂಲಿ ಹಾಗು ಹೊರಗುತ್ತಿಗೆ ಆದಾರದ ಮೇಲೆ ಸುಮಾರು ೨೦-೨೫ ವರ್ಷದಿಂದ ದುಡಿಯುತ್ತಿರುವ ನೌಕರರಿಗೆ ಸೇವಾಭದ್ರತೆ ಹಾಗು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಪದಾಧಿಕಾರಿಗಳು ಶಾಸಕ ಎಂ.ರಾಜಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಶಾಸಕರ ಗೃಹಕಚೇರಿಯಲ್ಲಿ ಬುಧವಾರ ಶಾಸಕ ಎಂ.ರಾಜಣ್ಣರನ್ನು ಭೇಟಿ ಮಾಡಿದ ಸಿಐಟಿಯು ಪದಾಧಿಕಾರಿಗಳು ಸರ್ಕಾರ ಇದೀಗ ವಿದ್ಯಾರ್ಹತೆ ಮೇಲೆ ಕಾಯಂ ನೌಕರರನ್ನಾಗಿಸಲು ಮುಂದಾಗಿದೆ. ಅನಕ್ಷರಸ್ಥರಾದ ಬಹುತೇಕ ಅಡುಗೆ ನೌಕರರು ಬೀದಿಗೆ ಬೀಳಲಿದ್ದೇವೆ. ಹಾಗಾಗಿ ಅನುಭವದ ಆದಾರದ ಮೇಲೆ ನಮ್ಮನ್ನು ನೌಕರರನ್ನಾಗಿ ಪರಿಗಣಿಸಿ ನಮಗೆ ಸೇವಾ ಭದ್ರತೆ ಒದಗಿಸಿ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಮಸ್ಯೆಗಳನ್ನು ಮುಂಬರುವ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಹಾಸ್ಟೆಲ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀರಾಮಣ್ಣ, ಕಾರ್ಯದರ್ಶಿ ಪಾಪಣ್ಣ, ನರಸಿಂಹಮೂರ್ತಿ, ಸರಸ್ವತಮ್ಮ, ಮಂಜುಳಮ್ಮ, ಗಂಗಾದರಪ್ಪ, ಪಾರ್ವತಮ್ಮ, ವಿಜಯಮ್ಮ ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!