ಜನಪರ ಕಲ್ಯಾಣ ಯೋಜನೆಗಳನ್ನು ರಾಜ್ಯದ ಜನತೆಗೆ ಕೊಟ್ಟಿರುವ ಸಿದ್ದರಾಮಯ್ಯ ಸರ್ಕಾರವನ್ನು ಮೆಚ್ಚಿ ಈ ಬಾರಿ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಕೆ.ಪಿ.ಸಿ.ಸಿ.ಉಪಾದ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೇಸ್ ಭವನದಲ್ಲಿ ನಡೆದ ಅಬ್ಲೂಡು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಚುನಾವಣಾ ಸ್ವರ್ಧೆಯ ಅಕಾಂಕ್ಷಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕೆ.ಎಚ್.ಮುನಿಯಪ್ಪ ಹಾಗೂ ನನ್ನ ನಡುವೆ ಇರುವ ವ್ಯೆಷಮ್ಯ ನಮ್ಮ ಸ್ವಂತ ವಿಷಯ ಇದನ್ನು ಪಕ್ಷದ ಮೇಲೆ ಹೇರಲ್ಲ ನಾನು ಪಕ್ಷಕ್ಕೆ ದೋಹ್ರ ಬಗೆಯುವುದಿಲ್ಲ ರಾಷ್ಟ್ರ ಹಾಗೂ ರಾಜ್ಯದ ವರಿಷ್ಠರ ನಿರ್ದೇಶನದಂತೆ ಕೆಲಸ ಮಾಡುತ್ತೇನೆ. ಜೆ.ಡಿ.ಸ್.ಮುಖಂಡರು ನಮ್ಮ ನಡುವಿನ ಒಡಕನ್ನು ಅಪಪ್ರಚಾರ ಮಾಡಿ ಈ ಬಾರಿ ಚುನಾವಣೆಗಳಲ್ಲಿ ಹೆಚ್ಚು ಸ್ಢಾನಗಳನ್ನು ಗೆಲ್ಲುವುದು ಅವರ ಭ್ರಮೆ ನಮ್ಮ ಪಕ್ಷದಲ್ಲಿ ಹೆಚ್ಚಿನ ಆಕ್ಷಾಂಕ್ಷಿಗಳ ಪಟ್ಟಿ ಹೇಳುತ್ತದೆ. ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎನ್ ಮುನಿಯಪ್ಪ,ಆರ್ ಶ್ರೀನಿವಾಸ್ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್ ಟಿ.ಪಿ.ಎಸ್ ಮಾಜಿ ಅಧ್ಯಕ್ಷರಾದ ವೇಣು ಗೋಪಾಲ್, ಮುನಿಕೃಷ್ಣಪ್ಪ ಮುಖಂಡರಾದ ಸಾದಲಿ ಜೈ ಪ್ರಕಾಶ್, ಬೆಳ್ಳೂಟಿ ಸಂತೋಷ್, ನಿರಂಜನ್, ರಾಜ್ ಕುಮಾರ್, ಎಲ್ ಮಧು, ಶಂಕರ್, ರಾಘವೇಂದ್ರ ಮುಂತಾದವರು ಹಾಜರಿದ್ದರು
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







