ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೪ ನೇ ವಾರ್ಡಿನ ನಂದು (ಕಿಶನ್) ಆಯ್ಕೆಯಾಗಿದ್ದಾರೆ.
ನಗರದ ನಗರಸಭಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ನೂತನವಾಗಿ ಆಯ್ಕೆಯಾಗಿರುವ ಸ್ಥಾಯಿ ಸಮಿತಿ ಅಧ್ಯಕ್ಷ ನಂದು (ಕಿಶನ್) ಅವರನ್ನು ಅಧ್ಯಕ್ಷೆ ಮುಷ್ಟರಿತನ್ವೀರ್ ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಆಯುಕ್ತ ಹರೀಶ್ ಸೇರಿದಂತೆ ಸದಸ್ಯರುಗಳು ಅಭಿನಂದಿಸಿದರು.
ಕಾರ್ಯಾಲಯದ ಹೊರಗೆ ನಂದು ಬೆಂಬಲಿಗರು ಪಟಾಕಿಗಳನ್ನು ಸಿಡಿಸಿ ಮೆರವಣಿಗೆಯ ಮೂಲಕ ಸಂಭ್ರಮಾಚರಣೆ ಮಾಡಿದರು.
ಸ್ಥಾಯಿ ಸಮಿತಿಯ ಪದಾಧಿಕಾರಿಗಳು: ನಂದು (ಪಿ.ಕೆ.ಕಿಶನ್) ಅಧ್ಯಕ್ಷ, ಸದಸ್ಯರಾದ ಶಮಿವುಲ್ಲಾ, ರಾಘವೇಂದ್ರ, ಸರಳಶ್ರೀಧರ್, ಜಬೀವುಲ್ಲಾ, ಸುನೀತಾಶ್ರೀನಾಥ್, ಸುಹೇಲ್ಅಹ್ಮದ್, ವಹೀದಾಕೌಸರ್, ಎಚ್.ಎಸ್.ನಯಾಜ್, ಸಿಕಂದರ್, ಶಾಹಿದಾ.
- Advertisement -
- Advertisement -
- Advertisement -
- Advertisement -