19.6 C
Sidlaghatta
Saturday, February 28, 2026

ಹಗಲುಹೊತ್ತಿನಲ್ಲೇ ದರೋಡೆ

- Advertisement -
- Advertisement -

ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಟ್ಲಗಾನಹಳ್ಳಿ, ಹಿತ್ತಲಹಳ್ಳಿ, ಆನೂರು ಮತ್ತು ಜಪ್ತಿಹೊಸಹಳ್ಳಿ ಗ್ರಾಮಗಳಲ್ಲಿ ಸೋಮವಾರ ಹಗಲುಹೊತ್ತಿನಲ್ಲೇ ದರೋಡೆ ನಡೆದಿದೆ.
ತಾಲ್ಲೂಕಿನ ತೊಟ್ಲಗಾನಹಳ್ಳಿ ಗ್ರಾಮದ ಅಶ್ವತ್ಥಪ್ಪ ಎಂಬುವರ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಮನೆ ಬೀಗ ಮುರಿದು ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಲಾಗಿದೆ.
ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಸುನಂದಮ್ಮ ಎಂಬುವರ ಮನೆಯಲ್ಲಿ ಬಾಗಿಲು ಮುರಿದು ಬೀರುವಿನಲ್ಲಿದ್ದ 3 ಎಳೆ ಚಿನ್ನದ ಸರ, ಎರಡು ಜೊತೆ ಜುಮುಕಿ, 25 ಸಾವಿರ ರೂಪಾಯಿ ಹಣವನ್ನುದೋಚಲಾಗಿದೆ.
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಎಚ್.ನಾರಾಯಣಸ್ವಾಮಿ ಅವರ ಮನೆ ಬೀಗ ಮುರಿದು 200 ಗ್ರಾಮ್ ಬಂಗಾರ ದೋಚಿದ್ದರೆ, ಬಂಡಿಗೆಪ್ಪ ಅವರ ಮನೆಯ ಬೀಗ ಮುರಿದು ಎರಡು ಜೊತೆ ಓಲೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕಳ್ಳತನ ಮಾಡಲಾಗಿದೆ.
ಹಾಡಹಗಲೇ ಬಾಗಿಲು ಹಾಕಿರುವ ಮನೆಗಳನ್ನು ಗುರುತಿಸಿ ದರೋಡೆ ಮಾಡಿರುವುದು ತಾಲ್ಲೂಕಿನ ಜನರನ್ನು ಬೆಚ್ಚಿ ಬೀಳಿಸಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!