27.1 C
Sidlaghatta
Monday, July 14, 2025

ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿಯಿರಿ

- Advertisement -
- Advertisement -

ಜಗತ್ತಿನ ಶ್ರೇಷ್ಠ ಧರ್ಮಗಳಲ್ಲೊಂದಾದ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಧೈರ್ಯದಿಂದ ಹಿಂದೂಗಳು ಎಂದು ಹೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಕೈವಾರದ ಯೋಗಿನಾರಾಯಣ ಮಠದ ಧರ್ಮಾಧಿಕಾರಿ ಡಾ.ಎಂ.ಜಯರಾಂ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದಾಸ ಸಾಹಿತ್ಯ ಪರಿಷತ್ನ ನಗರ, ಮಹಿಳಾ, ಪ್ರಚಾರ ಘಟಕ ಹಾಗು ಹೋಬಳಿ ಘಟಕಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದಷ್ಟು ಶ್ರೇಷ್ಠ ಧರ್ಮ ಜಗತ್ತಿನಲ್ಲಿ ಮತ್ತೊಂದಿಲ್ಲ ಅಂತಹ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವುಗಳು ನಮ್ಮ ಧರ್ಮದ ಹೆಸರನ್ನು ಹೇಳಲು ಹಿಂಜರಿಯುವ ಬದಲಿಗೆ ಹೆಮ್ಮೆಯಿಂದ ನಾವು ಹಿಂದೂಗಳು ಎಂದು ಹೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು.
ಹಿಂದೂ ಧರ್ಮವನ್ನು ಪಾಲಿಸುತ್ತಿರುವ ನಾವುಗಳು ಧನ್ಯರು. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ ಹಾಗಂತ ನಮ್ಮ ಧರ್ಮ ನಮಗೆ ಶ್ರೇಷ್ಠ ಎಂದು ಹೇಳಿಕೊಳ್ಳಲು ಹಿಂಜರಿಕೆಯಾಕೆ ಎಂದರು.
ಇದೀಗ ಸತ್ಯಕಾಲದಲ್ಲಿ ಜೀವಿಸುತ್ತಿರುವ ನಾವುಗಳು ಏನೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಹಾಗಾಗಿ ಸತ್ಯ ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರೂ ತಮ್ಮ ನಡೆ ನುಡಿಗಳನ್ನು ಸರಿದಾರಿಯಲ್ಲಿ ಸಾಗುವಂತೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಕೈವಾರದ ಯೋಗಿನಾರಾಯಣ ಮಠದ ಉಪಾಧ್ಯಕ್ಷ ವಿಭಾಕರರೆಡ್ಡಿ, ಬಾಲಕೃಷ್ಣ ಭಾಗವತಾರ್, ಪುರದಗಡ್ಡೆ ಕೃಷ್ಣಪ್ಪ, ಪ್ರವಚನಕಾರ ತಳಗವಾರ ಆನಂದ್, ಡಾ.ಸತ್ಯನಾರಾಯಣರಾವ್, ಬಿ.ಪಿ.ರಾಘವೇಂದ್ರ, ಶ್ರೀನಿವಾಸರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!