ಗ್ಯಾಸ್ ಸೋರುವಿಕೆ ಬಂದ ತಕ್ಷಣ ಗ್ಯಾಸ್ ಸಿಬ್ಬಂದಿಯವರಿಗೆ ತಿಳಿಸಬೇಕು. ಎಚ್ಚರಿಕೆಯಿಂದ ಗ್ಯಾಸ್ ಉಪಯೋಗಿಸಿಬೇಕೆಂದು ವಾಸವಿ ಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ್ ತಿಳಿಸಿದರು.
ನಗರದ ವಾಸವಿ ಶಾಲೆಯಲ್ಲಿ ಗುರುವಾರ ಅಡುಗೆ ಅನಿಲ ಬಳಕೆಯ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ಯಾಸ್ ಸಿಲಿಂಡರ್ ಪಡೆಯುವಾಗ ವಾಷರ್ರನ್ನು ಪರೀಕ್ಷಿಸಿ ಗ್ಯಾಸ್ ಪಡೆದುಕೊಳ್ಳಿ. ವಾಷರ್ ಇಲ್ಲದ ಪಕ್ಷದಲ್ಲಿ ಗ್ಯಾಸ್ ಸಿಬ್ಬಂದಿಗೆ ತಿಳಿಸತಕ್ಕದ್ದು. ಕೆಲ ಮನೆಗಳಲ್ಲಿ ಗ್ಯಾಸ್ ಆನ್ ಮಾಡಿ ಟಿ.ವಿ.ಯಲ್ಲಿ ಧಾರಾವಾಹಿ ನೋಡುವುದಕ್ಕೆ ಹೋಗುತ್ತಾರೆ. ಈ ವಿಷಯದ ಬಗ್ಗೆ ಮಹಿಳೆಯರು ಜಾಗೃತರಿರಬೇಕೆಂದು ತಿಳಿಸಿದರು.
ಇಂಡಿಯನ್ ಅಯಲ್ ಕಾರ್ಪೊರೇಷನ್ ವತಿಯಿಂದ ಅಡುಗೆ ಅನಿಲದ ಚುಟುಕು ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಒಂಬತ್ತನೇ ತರಗತಿಯ ಅಮೂಲ್ಯ, ಎರಡನೇ ಬಹುಮಾನ ಎಂಟನೇ ತರಗತಿಯ ವೇದ ಮತ್ತು ಮೂರನೇ ಬಹುಮಾನ ಒಂಬತ್ತನೇ ತರಗತಿಯ ಸಹನಾಶ್ರೀ ಪಡೆದರು.
ವಾಸವಿ ಶಾಲೆಯ ಕಾರ್ಯದರ್ಶಿ ಸತ್ಯನಾರಾಯಣ ಶೆಟ್ಟಿ, ವಿಜ್ಞಾನ ವಿಭಾಗದ ಶಿಕ್ಷಕ ವಿಜಯ್ ಕುಮಾರ್, ಇಂಡಿಯನ್ ಗ್ಯಾಸ್ನ ಮಾಲೀಕ ನಾಗರಾಜು, ಇಂಡಿಯನ್ ಗ್ಯಾಸ್ನ ಭರತ್, ಅಣ್ಣಪ್ಪ, ಶಿವಣ್ಣ, ರಮೇಶ್, ಶಶಿಧರ್, ಶೌಕತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







