30.5 C
Sidlaghatta
Sunday, February 22, 2026

ಅಲಂಕೃತವಾಗಿದ್ದ ದೀಪಗಳನ್ನು ಹೊತ್ತು ಮಳ್ಳೂರಿನಿಂದ ಮೇಲೂರಿಗೆ ಆಗಮಿಸಿದ ಮಹಿಳೆಯರು

- Advertisement -
- Advertisement -

ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಗಂಗಾದೇವಿಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ವಾಡಿಕೆಯಂತೆ ಈ ವರ್ಷವೂ ಕೂಡಾ ಜಾತ್ರಾ ಮಹೋತ್ಸವದ ಅಂಗವಾಗಿ ತಯಾರಿಸಲಾಗಿದ್ದ ವಿವಿಧ ಬಗೆಯ ಅಲಂಕೃತವಾಗಿದ್ದ ದೀಪಗಳನ್ನು ಹೊತ್ತು ನಡೆದ, ಮಹಿಳೆಯರು ಹಾಗೂ ಯುವತಿಯರು, ನೆರೆಯ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಬೆಳಗಿದರು.
ಮಳೆ ಬರುವ ನಂಬಿಕೆ: ಪ್ರತಿವರ್ಷವೂ ಗಂಗಾದೇವಿಯ ಜಾತ್ರೆಯ ಅಂಗವಾಗಿ ದೀಪೋತ್ಸವಗಳನ್ನು ಮಾಡಿದಾಗ ಈ ಭಾಗದಲ್ಲಿ ಉತ್ತಮವಾದ ಮಳೆಯಾಗುವುದರ ಜೊತೆಗೆ ಇತಿಹಾಸ ಪ್ರಸಿದ್ದ ಗಂಗಮ್ಮನ ಕುಂಟೆಯು ಸಂಪೂರ್ಣವಾಗಿ ತುಂಬಿ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದರ ಜೊತೆಗೆ ಕಾಲ ಕಾಲಕ್ಕೆ ಮಳೆಯಾಗುವ ನಂಬಿಕೆಯಿದೆ, ಒಂದು ವೇಳೆ ಗ್ರಾಮದಲ್ಲಿ ದೀಪಗಳನ್ನು ಮಾಡಿ, ಮೇಲೂರಿನ ಗಂಗಾದೇವಿ ದೇವಾಲಯಕ್ಕೆ ಹರಕೆ ಸಲ್ಲಿಸದಿದ್ದರೆ, ಅಂತಹ ವರ್ಷದಲ್ಲಿ ಮಳೆಯು ಕಡಿಮೆ, ತೀವ್ರ ಬರಗಾಲವನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಆಚರಣೆಯನ್ನು ಪ್ರತಿವರ್ಷ ಮಾಡಿಕೊಂಡು ಬರುತ್ತಿದ್ದೇವೆ ಎಂದು ಗ್ರಾಮದ ಮುಖಂಡ ಕದಿರಪ್ಪ ತಿಳಿಸಿದರು.
ಮೇಲೂರು ಗ್ರಾಮಕ್ಕೆ ಆಗಮಿಸಿದ ಮಳ್ಳೂರಿನ ದೀಪಗಳನ್ನು ಹೊತ್ತು ತಂದವರನ್ನು ಗ್ರಾಮ ಪಂಚಾಯತಿ ಸದಸ್ಯ ಕೆ.ಮಂಜುನಾಥ್ ನೇತೃತ್ವದಲ್ಲಿ ಮಜ್ಜಿಗೆ, ಪಾನಕ, ತಿಂಡಿ, ತಿನಿಸುಗಳನ್ನು ನೀಡಿ ಸ್ವಾಗತಿಸಲಾಯಿತು.
ತಾಲ್ಲೂಕು ಪಂಚಾಯತಿ ಸದಸ್ಯ ಮುನಿಯಪ್ಪ, ದಲಿತ ಮುಖಂಡರುಗಳಾದ ಸಿ.ಎಂ.ಮುನಿಯಪ್ಪ, ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್, ವೇಣುಗೋಪಾಲ್, ಅಶೋಕ್, ಕೇಶವ ಮುಂತಾದವರು ದೀಪಗಳೊಂದಿಗೆ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!