ಅವಿಭಜಿತ ಕೋಲಾರ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಕಥೆಗಳ ಆಹ್ವಾನ

- Advertisement -
- Advertisement -

ಬೆಂಗಳೂರಿನ ನಿವೇದಿತ ಪ್ರಕಾಶನದ ಉಮೇಶ್ ಅವಿಭಜಿತ (ಕೋಲಾರ, ಚಿಕ್ಕಬಳ್ಳಾಪುರ) ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನವನ್ನು ಪ್ರಕಟಿಸಲು ಮುಂದಾಗಿದ್ದಾರೆ. ಹಾಗಾಗಿ ಆಯ್ಕೆಗೆ ಅನುಕೂಲವಾಗುವಂತೆ ಎರಡು ಉತ್ತಮ ಕಥೆಗಳನ್ನು ಈ ಕೆಳಗಿನ ಇ-ಮೇಲ್ ವಿಳಾಸಗಳಲ್ಲಿ ಒಂದಕ್ಕೆ ಕಳುಹಿಸಬಹುದು ಎಂದು ಸಾಹಿತಿ ಸ.ರಘುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಿಭಜಿತ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನವನ್ನು ಸಂಪಾಧಿಸುವ ಜವಾಬ್ದಾರಿಯನ್ನು ಸ.ರಘುನಾಥ, ಆರ್.ವಿಜಯರಾಘವನ್ ಹಾಗೂ ಬಂಗಾರಪೇಟೆಯ ಕಾ.ಹು.ಚಾನ್ಪಾಷ ಅವರಿಗೆ ವಹಿಸಲಾಗಿದೆ.
ಈ ಸಂಕಲನ ಅರ್ಥಪೂರ್ಣ ಅನ್ನಿಸಲು ಎಲ್ಲಾ ಲೇಖಕರ ಕಥೆಯೂ ಇರಬೇಕೆಂಬುದು ನಮ್ಮ ಅಭಿಲಾಶೆ. ಹಾಗಾಗಿ ಆಯ್ಕೆಗೆ ಅನುಕೂಲವಾಗುವಂತೆ ಎರಡು ಉತ್ತಮ ಕಥೆಗಳನ್ನು ಕಳುಹಿಸಬಹುದು. ಒಂದು ವೇಳೆ ಇಮೇಲ್ ಅನುಕೂಲವಿಲ್ಲವಾದಲ್ಲಿ ಅದನ್ನೇ ಟೈಪ್ ಮಾಡಿಸಿ ಸಿ.ಡಿ. ಮೂಲಕ ಸಂಪಾದಕರ ವಿಳಾಸಕ್ಕೆ ಕಳುಹಿಸಿಕೊಡಬಹುದು.
ಕಥೆ ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ಕಥೆಗಳು ೨೦೦೦ ಪದಗಳ ಮಿತಿಯಲ್ಲಿರಲಿ. ಜೊತೆಗೆ ಕಥೆಗಾರರ ಸಂಕ್ಷಿಪ್ತ ಪರಿಚಯ. ಪ್ರಕಟಿತ ಕಥೆಯಾಗಿದ್ದರೆ ದಯವಿಟ್ಟು ಅದರ ವಿವರವನ್ನು ಕಥೆಯ ಕಡೇ ಪುಟದಲ್ಲಿ ತಿಳಿಸಬೇಕು.
ಕಥೆಗಳ ಆಯ್ಕೆಗಾಗಿ ಇಬ್ಬರು ಓದುಗರು, ಇಬ್ಬರು ಕಥೆಗಾರರು, ವಿಮರ್ಶಕರೊಬ್ಬರನ್ನು ಒಳಗೊಂಡ ಆಯ್ಕೆ ಸಮಿತಿ ಇದ್ದು ಅವರು ಆಯ್ದ ಕಥೆಗಳನ್ನು ಸಂಕಲಿಸಲಾಗುವುದು.
ಈ ಕಾರ್ಯ ಮುಖ್ಯವಾಗಿ ಆಗಬೇಕೆಂಬ ತುಡಿತದಿಂದ ಮಾಡುತ್ತಿರುವುದು. ಗೌರವಧನ ನೀಡುವುದು ಕಷ್ಟವಾದುದು. ಹಾಗಾಗಿ ಇದಕ್ಕೆ ಪರ್ಯಾಯವೆಂದು ಭಾವಿಸಿ ಐದು ಪ್ರತಿಗಳನ್ನು ಗೌರವದಿಂದ ನೀಡಲಾಗುವುದು. ಕಥೆಗಳು ನಮಗೆ ಆಗಸ್ಟ್ 15 ರ ಒಳಗೆ ತಲುಪಬೇಕು ಎಂದು ತಿಳಿಸಿದ್ದಾರೆ.
ಇ-ಮೇಲ್: raghunathamalitata@gmail.com, viji56@gmail.com, kahuchanpasha15@gmail.com
ಸಂಪರ್ಕಕ್ಕೆ: ೯೪೮೩೧೩೭೮೮೫, ೯೯೦೦೨೬೩೧೭೮, ೮೫೫೩೭೦೧೫೮೫.
ವಿಳಾಸ: ಸ.ರಘುನಾಥ, ಕಂಟ್ರಾಕ್ಟರ್ರಾಜಣ್ಣನವರ ಮನೆ, ವೇಣು ವಿದ್ಯಾ ಸಂಸ್ಥೆ ಎದುರು,
ಕುವೆಂಪು ವೃತ್ತ, ಶ್ರೀನಿವಾಸಪುರ, ಕೋಲಾರಜಿಲ್ಲೆ – ೫೬೩ ೧೩೫

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!