ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮತ್ತು ತಹಶಿಲ್ದಾರ್ ಅರುಂಧತಿ ಅವರು ಭಾನುವಾರ ತಮ್ಮ ಸಿಬ್ಬಂದಿಯ ಜೊತೆಯಲ್ಲಿ ವಿದೇಶದಿಂದ ಹಿಂದಿರುಗಿ ಮನೆಗಳಲ್ಲಿಯೇ ಕ್ವಾರಂಟೈನ್ ಆಗಿರುವವರನ್ನು ಭೇಟಿ ಮಾಡಿ, ಅವರ ಆರೋಗ್ಯವನ್ನು ಪರೀಕ್ಷಿಸಿ, ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದರು.
ಸಾರ್ವಜನಿಕರು ದೂರವಾಣಿ ಕರೆ ಮಾಡಿ ಜಂಗಮಕೋಟೆಯಲ್ಲಿ ಇಬ್ಬರು ಮೆಕ್ಕಾದಿಂದ ಹಿಂದಿರುಗಿದ್ದಾರೆಂದು ತಿಳಿಸಿದಾಗ ಅಲ್ಲಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಆದರೆ ಅವರುಗಳು ಜೈಪುರದ ಬಳಿಯ ಅಜ್ಮೇರ್ ಗೆ ಹೋಗಿ ಬಂದವರೆಂದು ತಿಳಿದುಬಂದಿತು. ಅವರನ್ನೂ ಪರೀಕ್ಷಿಸಿ, ಅವರಿಗೂ ಮುನ್ನೆಚ್ಚರಿಕೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ತಹಶೀಲ್ದಾರ್ ಅರುಂಧತಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಪೊಲೀಸರೊಂದಿಗೆ ಮಾಕ್ ಡ್ರಿಲ್ ನಡೆಸಿದರು. ನಗರದ ತಾಲ್ಲೂಕು ಕಚೇರಿಯಿಂದ ಟಿ.ಬಿ. ರಸ್ತೆಯಲ್ಲಿ ದರ್ಗಾವರೆಗೂ ಜಾಥಾ ನಡೆಸಿದರು.
ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆಯಂತೆ ಮಾಕ್ ಡ್ರಿಲ್ ನಡೆಸಿದೆವು. ಮಕ್ಕಳು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ಮನೆಯಲ್ಲಿಯೇ ಉಳಿಯಿರಿ ಎಂಬ ಸಂದೇಶ ಹೊತ್ತು ಅಧಿಕಾರಿಗಳು ಜಾಥಾ ನಡೆಸಿದೆವು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ತಿಳಿಸಿದರು.
- Advertisement -
- Advertisement -
- Advertisement -