ಆರ್.ಟಿ.ಇ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ಒಂದಿ ಕಿ.ಮೀ ಅಂತರ ವಿಧಿಸಿರುವುದರಿಂದ ರೈತ ಮಕ್ಕಳು ಪ್ರವೇಶ ಪಡೆಯಲು ವಂಚಿತರಾಗುತ್ತಿದ್ದಾರೆ. ಉತ್ತಮ ಖಾಸಗಿ ಶಾಲೆಗಳು ನಗರಕ್ಕೆ ಹೊಂದಿಕೊಂಡಂತೆ ಇದ್ದು, ಈ ಯೋಜನೆ ಬಳಕೆಯಾಗದಂತಾಗಿದೆ. ಆದ್ದರಿಂದ ಈ ಯೋಜನೆಯ ನಿಬಂಧನೆಗಳನ್ನು ಸಡಿಲಗೊಳಿಸಬೇಕು. ಪ್ರವೇಶ ದಾಖಲಾತಿ ದಿನಾಂಕವನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಬಾಲಮುರಳಿಕೃಷ್ಣ, ಬಿ.ಕೆ.ಮುನಿಕೆಂಪಣ್ಣ, ಮಾರಪ್ಪ, ವೆಂಕಟೇಶಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







