ಮೊಬೈಲ್ಗೆ ಬರುತ್ತಿದ್ದ ಅನಾಮದೇಯ ಮೆಸೆಜ್ಗಳ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಸುಮಾರು ಐದಾರು ಮಂದಿ ಪುರುಷರು, ಆಶಾ ಕಾರ್ಯಕರ್ತೆರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಗುಡ್ಲುನಾರಸಿಂಹನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಎಂಬಾಕೆ ವೈ.ಹುಣಸೇನಹಳ್ಳಿ ಗ್ರಾಮದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರದಂದು ಇಂದ್ರಧನುಷ್ ಲಸಿಕೆಯನ್ನು ಹಾಕಿಸುವ ಕೆಲಸದ ನಿಮಿತ್ತ ಅಲಸೂರು ದಿನ್ನೆ ಗ್ರಾಮಕ್ಕೆ ಹೋಗಿದ್ದಾಗ, ಅಲ್ಲಿಗೆ ಬಂದಿರುವ ನಾಲ್ಕೈದು ಮಂದಿ ಪುರುಷರ ಗುಂಪು ಮೊಬೈಲ್ಗೆ ಮೆಸೆಜ್ಗಳು ಬರುತ್ತಿವೆ ಎಂದು ದೂರು ನೀಡಿರುವುದು ನೀವೆನಾ ಎಂದು ಕೇಳಿದ್ದಾರೆ. ಹೌದು ನಾನೇ ಎಂದ ತಕ್ಷಣ ಮರದ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ, ಗ್ರಾಮದ ಅಂಗನವಾಡಿ ಕೇಂದ್ರದಲ್ಲಿದ್ದ ಗರ್ಭಿಣಿ ಮಹಿಳೆಯರು ಕಿರುಚಾಡಿಕೊಂಡು ಹೊರಹೋಗಿದ್ದಾರೆ, ಸಹಾಯಕ್ಕೆ ಬಂದ ಶಾಲೆಯ ಶಿಕ್ಷಕರ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







