ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೋವಿಡ್ 19 ಕಾರ್ಯಪಡೆಯ ಸದಸ್ಯರು ಶನಿವಾರ ಅಪ್ಪೇಗೌಡನಹಳ್ಳಿಯಲ್ಲಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ 75 ಜನ ಕೂಲಿ ಕಾರ್ಮಿಕರಿಗೆ ಅಕ್ಕಿಯನ್ನು ವಿತರಿಸಿದರು.
ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದು, ಲಾಕ್ ಡೌನ್ ಆದ ಕಾರಣ ಅಪ್ಪೇಗೌಡನಹಳ್ಳಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ತಾಲ್ಲೂಕು ಆಡಳಿತದ ವತಿಯಿಂದ ಕೂಲಿ ಕಾರ್ಮಿಕರಿಗೆಂದು ಅಕ್ಕಿಯನ್ನು ನೀಡಿದ್ದು, ಪ್ರತಿ ಕೂಲಿ ಕಾರ್ಮಿಕರಿಗೂ ತಲಾ ಮೂರು ಕೇಜಿ ಅಕ್ಕಿಯನ್ನು ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೋವಿಡ್ 19 ಕಾರ್ಯಪಡೆಯವರು ನೀಡಿದರು.
ಅಕ್ಕಿಯನ್ನು ವಿತರಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದು, ಗುರುತುಗಳನ್ನು ಹಾಕಿ ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಿ ಅಕ್ಕಿ ನೀಡಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಎಚ್.ಎನ್. ಶ್ರೀನಿವಾಸ್, ಕರವಸೂಲಿಗಾರ ಎಂ.ಶ್ರೀನಿವಾಸ್, ನರೇಗಾ ತಾಂತ್ರಿಕ ಎಂಜಿನಿಯರ್ ಗೌತಮ್ ಕುಮಾರ್, ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಆಶಾ ಕಾರ್ಯಕರ್ತೆ ಟಿ.ಪ್ರೇಮಾ, ಅಂಬರೀಶ್, ಜಲಗಾರ ಮುನಿರಾಜು, ವೆಂಕಟೇಶ್, ತಿರುಮಲರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -







